Posts Slider

Karnataka Voice

Latest Kannada News

ಭಾರತದ ರಾಜ್ಯವೊಂದರಲ್ಲಿ ನಡೆಯುತ್ತಿದೆ ಕ್ರಾಂತಿ: ಆಕೆ ಆಗಲಿದ್ದಾಳೆ ಏಕ್ ದಿನ ಕಾ ಸಿಎಂ..!

1 min read
Spread the love

ಉತ್ತರಾಖಂಡ: ಇದು ದೇಶದಲ್ಲಿಯೇ ಹೊಸದೊಂದು ಇತಿಹಾಸವನ್ನ ಸೃಷ್ಟಿಸಲಿರುವ ಸುದ್ದಿ. ಸಿನೇಮಾವೊಂದರಲ್ಲಿ ಕಂಡು ಬಂದಿದ್ದ, ಚಿತ್ರಣ ದೇಶದ ರಾಜ್ಯವೊಂದರಲ್ಲಿ ನಾಳೆಗೆ ನಿಜವಾಗಲಿದೆ. ನಾಳೆ ಒಂದೀನಾ ಆ ರಾಜ್ಯಕ್ಕೆ ಆಕೆಯ ಮುಖ್ಯಮಂತ್ರಿ..!

ಹೌದು.. ಉತ್ತರಾಖಂಡ ರಾಜ್ಯದ ಹಾಲಿ ಮುಖ್ಯಮಂತ್ರಿ ತ್ರಿವೇಂದ್ರಸಿಂಗ್ ರಾವತ್ ನಾಳೆಗೆ ಮುಖ್ಯಮಂತ್ರಿಯಾಗಿರಲ್ಲ. ಬದಲಿಗೆ ಹರಿದ್ವಾರದ ಬಿಎಸ್ಸಿ ಅಗ್ರಿ ಪದವೀಧರೆ ಸೃಷ್ಠಿ ಗೋಸ್ವಾಮಿ ಮುಖ್ಯಮಂತ್ರಿಯಾಗಿ ದಿನ ಕಳೆಯಲಿದ್ದಾರೆ.

ಸೃಷ್ಠಿ ಈ ಮೊದನಿಂದಲೂ ರಾಜ್ಯದ ಬಾಲ ವಿಧಾನಸಭೆಯ ಮುಖ್ಯಮಂತ್ರಿಯಾಗಿದ್ದಾಳೆ. ಈಕೆಯ ತಂದೆ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಮನೆಗೆಲಸ ಮಾಡಿಕೊಂಡಿದ್ದಾಳೆ.

ರಾಷ್ಟ್ರೀಯ ಬಾಲಕಿಯರ ದಿನಾಚರಣೆ ಅಂಗವಾಗಿ ನಾಯಕ ಸಿನೇಮಾದ ಥರವೇ 19 ವರ್ಷದ ಸೃಷ್ಟಿ ಮುಖ್ಯಮಂತ್ರಿಯಾಗಲಿದ್ದಾಳೆ. ಅಷ್ಟೇ ಅಲ್ಲ, ನಾಳೆ ಹಲವು ಇಲಾಖೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಪಡೆಯಲಿದ್ದಾಳೆ.


Spread the love

Leave a Reply

Your email address will not be published. Required fields are marked *