Posts Slider

Karnataka Voice

Latest Kannada News

ಉಪ್ಪಿನಬೆಟಗೇರಿಯಲ್ಲಿ ‘ಆಕೆ’ ಹೊಲಕ್ಕೋಗಿ ಪ್ರಾಣ ಕಳೆದುಕೊಂಡಿದ್ದು ಯಾಕೆ…!

Spread the love

ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿ ಮಹಿಳೆಯೋರ್ವಳು ಹೊಲಕ್ಕೆ ಹೋಗಿ, ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

37ವಯಸ್ಸಿನ ನೀಲವ್ವ ಹಳೇಮನಿ ಎಂಬುವವರೇ ಕ್ರಿಮಿನಾಶಕ ಸೇವನೆ ಮಾಡಿ, ಸಾವಿಗೆ ಶರಣಾಗಿದ್ದಾರೆ. ಮನೆಯಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಕಿರುಕುಳವೇ ಕಾರಣವೆಂದು ಹೇಳಲಾಗುತ್ತಿದೆ.

ಮಹಿಳೆಯು ಮನೆಯಿಂದಲೇ ಕ್ರಿಮಿನಾಶಕವನ್ನ ತೆಗೆದುಕೊಂಡು ಹೋಗಿದ್ದಳೆಂದು ಗೊತ್ತಾಗಿದ್ದು, ಜೊತೆಗೆ ಯಾರೂ ಹೋಗಿದ್ದರೆಂದು ಪೊಲೀಸರು ತನಿಖೆಯನ್ನ ನಡೆಸುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದ ಹಾಗೇ, ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *