ಮಗ ಜೈಲು ಪಾಲು: ಉಣಕಲ್ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ‘ಹಡೆದವ್ವ’…!

ಹುಬ್ಬಳ್ಳಿ: ತನ್ನ ಪ್ರೀತಿಯ ಮಗ ಹೊಡೆದಾಡಿಕೊಂಡು ಜೈಲು ಪಾಲಾಗಿದ್ದರಿಂದ ಮನಸ್ಸಿಗೆ ಹಚ್ಚಿಕೊಂಡ ತಾಯಿಯೋರ್ವಳು ಉಣಕಲ್ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಉಣಕಲ್ ನಿವಾಸಿಯಾದ ದ್ಯಾಮವ್ವ ಉರ್ಫ್ ಭಾರತಿ ಪಾಟೀಲ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ತಾಯಿಯಾಗಿದ್ದಾಳೆ. ಇವರ ಸುಪುತ್ರ ವಿನಾಯಕಗೌಡ ಪಾಟೀಲ ಉದಯನಗರದಲ್ಲಿ ಮಾರುತಿ ಮಾನೆ ಮಗ ಸೇರಿದಂತೆ ಇನ್ನುಳಿದವರ ಜೊತೆ ಬಡಿದಾಡಿಕೊಂಡಿದ್ದನು. ಇದೇ ಕಾರಣಕ್ಕೆ ಪೊಲೀಸರು ಆತನನ್ನ ಬಂಧಿಸಿ, ಜೈಲಿಗಟ್ಟಿದ್ದರು.
ತನ್ನ ಮಗ ಜೈಲಿಗೆ ಹೋಗಿದ್ದನ್ನ ಮನಸ್ಸಿಗೆ ಹಚ್ಚಿಕೊಂಡ ತಾಯಿ, ಕೆರೆಗೆ ಹಾರವಾಗಿದ್ದಾರೆ. ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ವಿದ್ಯಾನಗರ ಠಾಣೆ ಪೊಲೀಸರು, ಮುಂದಿನ ಕಾನೂನು ಕ್ರಮವನ್ನು ಜರುಗಿಸಿದ್ದಾರೆ.