ಉಣಕಲ್ ಕೆರೆ ಬಳಿ “ಕಲ್ಮೇಶನ” ಶವ…!

ಹುಬ್ಬಳ್ಳಿ: ನಗರದ ಉಣಕಲ್ ಕೆರೆಯ ಪಕ್ಕದಲ್ಲಿಯೇ ವ್ಯಕ್ತಿಯೋರ್ವನ ಶವ ಸಿಕ್ಕಿದ್ದು, ಮುಖಕ್ಕೆ ರಕ್ತದ ಗಾಯಗಳಾಗಿದ್ದರಿಂದ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ.

ಉಣಕಲ್ ಗ್ರಾಮದ ನಿವಾಸಿಯಾಗಿರುವ ಕಲ್ಮೇಶ ಎಂಬಾತನ ಶವವನ್ನ ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನ ಶವ ಬೇರೆಯದ್ದೆ ಸ್ವರೂಪದಲ್ಲಿ ಬಿದ್ದಿದೆ.
ಕಲ್ಮೇಶನ ಶವದ ಮುಖಕ್ಕೆ ಗಾಯಗಳಾಗಿರುವ ಶಂಕೆಯಿದೆ. ಆತನೇ ಇಲ್ಲಿಗೆ ಬಂದು ಸಾವನ್ನಪ್ಪಿದ್ದಾನಾ ಅಥವಾ ಬೇರೆ ಏನಾದರೂ ಅವಘಡ ಸಂಭವಿಸಿದೇಯಾ ಎಂಬ ಸಂಶಯ ಮೂಡಿದೆ.
ಘಟನೆಯ ಬಗ್ಗೆ ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆಯನ್ನ ಕೈಗೊಂಡಿದ್ದಾರೆ.