ಉಮೇಶ್ ಕತ್ತಿ ಮಂತ್ರಿ ಸ್ಥಾನ ಕೇಳಿದ್ರೇ ತಪ್ಪೇನು..?: ಸಂಸದ ಬಚ್ಚೇಗೌಡ ಪ್ರಶ್ನೆ
1 min readಚಿಕ್ಕಬಳ್ಳಾಪುರ: ಬಿಜೆಪಿಯಲ್ಲಿರೋದು ಒಂದೇ ಬಣ ಯಾವ ಬಣವೂ ಇಲ್ಲ. ಮಂತ್ರಿಯಾಗಬೇಕು ಅಂತ ಕೆಲವರು ಕೇಳ್ತಾರೆ ಆಸೆಯಿರೋದು ತಪ್ಪಾ..? ಕೇಳೋದ್ರಲ್ಲಿ ಏನು ತಪ್ಪಿಲ್ಲ ಎಂದು ಸಂಸದ ಬಚ್ಚೆಗೌಡ ಅಭಿಪ್ರಾಯಪಟ್ಟರು.
ಏನ್ ತಪ್ಪಿದೆ ಕೇಳದಿದ್ರೇ ಯಾರಾದ್ರೂ ಮಂತ್ರಿ ಸ್ಥಾನ ಕೊಡ್ತಾರಾ..? ಕೇಳಿದ ಮಾತ್ರಕ್ಕೆ ವಿರೋಧ ಅಂತ ಹೇಳಲು ಆಗಲ್ಲ. ಉಮೇಶ್ ಕತ್ತಿ ಕೇಳಿದ್ದು ತಪ್ಪಾ..? ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಬಣ, ಮೂಲ ,ವಲಸಿಗ ವಿಚಾರ. ರಾಜಕೀಯ ಪಕ್ಷ ಬಾಗಿಲು ಮುಚ್ಚಿ ಪಕ್ಷ ಕಟ್ಟಲಾಗುವುದಿಲ್ಲ. ಬೇರೆ ಬಂದ ಪಕ್ಷದವರನ್ನ ಸೇರಿಸಿಕೊಂಡಾಗಲೇ ಪಕ್ಷ ಬೆಳೆಯೋದು. ನಾನು ಸಹ ಬೇರೆ ಪಕ್ಷದಿಂದ ಬಂದ ಬಿಜೆಪಿಯಲ್ಲಿ ಬೆಳೆದವನು. ಬೇರೆ ಪಕ್ಷದವರು ಬಂದಾಗ ಬೇಜಾರು ಆಗೋದು ಸಹಜ ಆದ್ರೆ ಸಹಿಸಿಕೊಳ್ಳಲೇಬೇಕು. ಅಧಿಕಾರವೇ ಬೇಕು ಅಂತ ಎಲ್ಲರೂ ಕೇಳುವ ಆಗಿಲ್ಲ ಅರ್ಹತೆ ಇದ್ದವರಿಗೆ ಸಿಗುತ್ತೆ.