“ಉಜ್ಜಯಿನಿ ಪೀಠ” ಈಗಿದ್ದವರು ಅಧಿಕೃತವಲ್ವಂತೆ: ನಾಳೆಯ ಸಭೆಗೆ ಎಷ್ಟು ಮಹತ್ವವಿದೆ…!?

ಮುಕ್ತಿ ಮಂದಿರದಲ್ಲಿ ನಾಳೆ ನಡೆಯಲಿದೆ ಮಹತ್ವದ ಸಭೆ
ಉಜ್ಜಯಿನಿ ಮಠದ ಜಗದ್ಗುರು ಪ್ರಕಟಣೆ
ಗದಗ: ಮುಕ್ತಿಮಂದಿರದಲ್ಲಿ ನಾಳೆ ನಡೆಯುವ ಸಭೆಯಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಮಾನವಧರ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೇದಾರ ಜಗದ್ಗುರುಗಳು ಶಕ್ತಿಪೀಠದಲ್ಲಿದ್ದು, ಅವರಿಲ್ಲದೇ ತೆಗೆದುಕೊಂಡ ತೀರ್ಮಾನಗಳು ಊರ್ಜಿತವಲ್ಲ ಎಂದು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಪೀಠದ ಅಧಿಕೃತ ಜಗದ್ಗುರುಗಳೆಂದು ಹೇಳಿಕೊಂಡಿರುವವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಪ್ರಕಟಣೆಯ ಪತ್ರ
ಉಜ್ಜಯಿನಿ ಪೀಠದಲ್ಲಿ ಹಾಲಿ ಇರುವ ಜಗದ್ಗುರುಗಳು ಅಧಿಕೃತ ಅಲ್ಲ. ಅಧಿಕೃತ ಇರಬೇಕಾದವರನ್ನ ಮಠಕ್ಕೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಇದೇ, ಕಾರಣದಿಂದ ಸಭೆ ನಡೆಸುವ ತಂತ್ರ ರೂಪಿಸಲಾಗಿದೆ ಎಂದು ಹೇಳಲಾಗಿದೆ.
ನಾಳೆ ಮುಕ್ತಿಮಂದಿರದಲ್ಲಿ ನಡೆಯುವ ಸಭೆಯು ತೀವ್ರ ಕುತೂಹಲ ಕೆರಳಿಸಿದ್ದು, ಸಾವಿರಾರೂ ಭಕ್ತರು ಜಮಾಯಿಸುವ ಸಾಧ್ಯತೆಯಿದೆ.