ತ್ರಿಶಂಕು ಸ್ಥಿತಿಗೆ ಹಳ್ಳಿ ಹಕ್ಕಿ ಎಚ್.ವಿಶ್ವನಾಥ: ಈ ವಯಸ್ಸಲ್ಲೂ ಸ್ಥಾನಕ್ಕಾಗಿ ಕಾಯುವಿಕೆ
1 min readಬೆಂಗಳೂರು: ರಾಜಕಾರಣದಲ್ಲಿ ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ ಎಂಬುವುದಕ್ಕೆ ಹುಣಸೂರು ಮಾಜಿ ಶಾಸಕ ಎಚ್.ವಿಶ್ವನಾಥ ತಾಜಾ ಉದಾಹರಣೆ. ಈ ವಯಸ್ಸಲ್ಲೂ ಸ್ಥಾನಕ್ಕಾಗಿ ಅಲೆದಾಡುವ ಪರಿಸ್ಥಿತಿ ಬಂದಿರುವುದು ಸೋಜಿಗವೇ ಸರಿ.
ಜೆಡಿಎಸ್ನಲ್ಲಿದ್ದ ಎಚ್.ವಿಶ್ವನಾಥ ಬಿಜೆಪಿಗೆ ತೆರಳಿದ್ದು ನಂತರ ಅನರ್ಹರಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಅವರು ಸೋತ ನಂತರ ಎಂಎಲ್ಸಿ ಆಗ್ತಾರೆ ಅನ್ನೋದು ಕೂಡಾ ಸುಳ್ಳಾಗಿದೆ. ಹೀಗಾಗಿ ಹಳ್ಳಿ ಹಕ್ಕಿ ತ್ರಿಶಂಕು ಸ್ಥಿತಿಗೆ ತಲುಪಿದೆ.
ವಯಸ್ಸು ಮೀರಿದಾಗಲೂ ಪಕ್ಷಾಂತರ ಮಾಡಿ ಸೋತು, ಏನೂ ಆಗದೇ ಅಲೆದಾಡುವ ಸ್ಥಿತಿಗೆ ಬಂದಿರುವುದು ರಾಜಕಾರಣವೇ ಹೊರತು ಮತ್ತೇನು ಅಲ್ಲಾ…