Posts Slider

Karnataka Voice

Latest Kannada News

ನಾಳೆ ಶ್ರೀ ಫಕೀರ ದಿಂಗಾಲೇಶ್ವರ “ಭಕ್ತರ ಸಭೆ”- ಚುನಾವಣೆ ಸ್ಪರ್ಧೆ 100% ಸತ್ಯವಲ್ಲ….!!!!

Spread the love

ಧಾರವಾಡ: ಶಿರಹಟ್ಟಿಯ ಶ್ರೀ ಫಕೀರೇಶ್ವರ ಮಠದ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಭಕ್ತರ ಸಭೆಯನ್ನ ಧಾರವಾಡದ ಸೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಹತ್ವದ ನಿರ್ಣಯ ಹೊರಬರುವ ಸಾಧ್ಯತೆಯಿದೆ.

ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ವಿರುದ್ಧ ಮತದಾನ ಮಾಡುವಂತೆ ಕರೆ ನೀಡುತ್ತಿರುವ ಶ್ರೀಗಳು, ಕರೆದ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ನಾಳೆ ನಡೆಯುವ ಸಭೆಯಲ್ಲಿ ಶ್ರೀಗಳು, ತಾವೇ ಅಭ್ಯರ್ಥಿಯಾಗಿ ಘೋಷಣೆ ಮಾಡಲಿದ್ದಾರೆಂಬ ವದಂತಿ ರಾಜಕೀಯ ವಲಯದಲ್ಲಿ ಹಬ್ಬಿದ್ದು, ಅದು ಕೇವಲ ವದಂತಿಯಾಗಿಯೇ ಉಳಿಯಲಿದೆ ಎಂದು ಹೇಳಲಾಗುತ್ತಿದೆ.

ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಯಾವುದೇ ಕಾರಣಕ್ಕೂ ಚುನಾವಣೆಯ ಅಖಾಡಕ್ಕೆ ಇಳಿಯುವುದಿಲ್ಲವೆಂಬುದು ಮೂಲಗಳಿಂದ ತಿಳಿದು ಬಂದಿದೆ.


Spread the love

Leave a Reply

Your email address will not be published. Required fields are marked *