Posts Slider

Karnataka Voice

Latest Kannada News

ಟಿಸ್ಸ್’ ಮತ್ತೆ ಸಿಕ್ಕಿಬಿದ್ದ: ಹುಬ್ಬಳ್ಳಿಯಲ್ಲಿ ಗಾಂಜಾ ಮತ್ತೆ ಪತ್ತೆ: ಇಬ್ಬರ ಬಂಧನ

Spread the love

ಹುಬ್ಬಳ್ಳಿ: ಶ್ರೀ ಬನಶಂಕರಿ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯವರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ತಿಮ್ಮಸಾಗರದ ಟಿಸ್ಸ್ ಅಲಿಯಾಸ್ ವಿಶ್ವನಾಥ ಮಲ್ಲಪ್ಪ ಕರಡಿಗುಡ್ಡ ಹಾಗೂ ಮಂಟೂರ ರಸ್ತೆಯ ನರೇಶಕುಮಾರ ರಾಜನ್ನ ನಾಯಕಂಟಿ ಎಂಬಿಬ್ಬರನ್ನ ಹಿಡಿದಿರುವ ಪೊಲೀಸರು ಅವರಿಂದ 1ಕೆಜಿ 795 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.

ಗಾಂಜಾ ಸಾಗಾಟಕ್ಕೆ ಬಳಕೆ ಮಾಡುತ್ತಿದ್ದ ಟಿವಿಎಸ್ ಜೂಪಿಟರ್ ಹಾಗೂ ಎರಡು ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.

ಠಾಣೆಯ ಇನ್ಸ್ ಪೆಕ್ಟರ್ ಎನ್.ಸಿ.ಕಾಡದೇವರಮಠ, ಸಿಬ್ಬಂದಿಗಳಾದ ಬಿ.ಕೆ.ಹೂಗಾರ, ಸಿ.ಎಂ.ಕಂಬಾಳಿಮಠ, ರವಿ ಕೋಳಿ, ಎಂ.ಡಿ.ಬಡಿಗೇರ, ವೈ.ಎಫ್.ದಾಸಣ್ಣನವರ, ಪಿ.ಬಿ.ಹಿರಗಣ್ಣನವರ, ಮೋಹನ ಈಳಿಗೇರ, ರಾಕೇಶ ಗೋರ್ಕಲ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ನಿನ್ನೆಯಷ್ಟೇ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಗಾಂಜಾವನ್ನ ರಿಕವರಿ ಮಾಡಿ ಇಬ್ಬರನ್ನ ಬಂಧಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.


Spread the love

Leave a Reply

Your email address will not be published. Required fields are marked *