Karnataka Voice

Latest Kannada News

ಹುಂಡಿ, ಮನೆ, ಬಾರ್ ಕಳ್ಳತನ: ಮೂವರನ್ನ ಹೆಡಮುರಿಗೆ ಕಟ್ಟಿದ “PI ರವಿಚಂದ್ರ ಟೀಂ”…

Spread the love

ಹುಬ್ಬಳ್ಳಿ: ದೇವಸ್ಥಾನದ ಹುಂಡಿ, ಬಾರ್ ಹಾಗೂ ಮನೆಗಳನ್ನ ಕಳ್ಳತನ ಮಾಡುತ್ತಿದ್ದ ಮೂವರನ್ನ ಬಂಧನ ಮಾಡುವಲ್ಲಿ ಉಪನಗರ ಠಾಣೆಯ ಇನ್ಸಪೆಕ್ಟರ್ ರವಿಚಂದ್ರ ಬಡಫಕ್ಕೀರಪ್ಪನವರ ತಂಡ ಯಶಸ್ವಿಯಾಗಿದೆ.

ಬಂಧಿತ ಆರೋಪಿಗಳನ್ನ ಉಣಕಲ ಯಲ್ಲಮ್ಮನ ಗುಡಿ ಹತ್ತಿರದ ಆನಂದ ಮಹದೇವಪ್ಪ ಹೂಗಾರ, ಧಾರವಾಡ ಮಣಕಿಲ್ಲಾದ ಹಸನ ಕಾಶೀಂಸಾಬ ಬೇಗ ಹಾಗೂ ಹುಬ್ಬಳ್ಳಿ ಕಾರಾಗೃಹದ ಬಳಿಯ ಬಸವರಾಜ ಫಕ್ಕೀರಪ್ಪ ಹುಡೇದ ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 10 ಗ್ರಾಂ ಚಿನ್ನ, 60 ಗ್ರಾಂ ಬೆಳ್ಳಿ ಹಾಗೂ 42ಸಾವಿರ ರೂಪಾಯಿ ವಶಕ್ಕೆ ಪಡೆಯಲಾಗಿದ್ದು, ಒಟ್ಟು ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಖಚಿತಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ಸಪೆಕ್ಟರ್ ರವಿಚಂದ್ರ ಡಿ.ಬಿ ನೇತೃತ್ವದಲ್ಲಿ ಪಿಎಸ್ಐ ಕವಿತಾ ಎಸ್.ಎಂ, ಪ್ರೋಬೇಷನರಿ ಪಿಎಸ್ಐ ಸ್ವಾತಿ ಮುರಾರಿ, ಎಎಸ್ಐ ಎಂ.ಆರ್.ಮಲ್ಲಿಗವಾಡ, ಸಿಬ್ಬಂದಿಗಳಾದ ಶ್ರೀನಿವಾಸ ಯರಗುಪ್ಪಿ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಕೃಷ್ಣಾ ಮೊಟೆಬೆನ್ನೂರ, ಮಂಜುನಾಥ ಹಾಲವರ, ಪ್ರಕಾಶ ಕಲಗುಡಿ, ರೇಣು ಸಿಕ್ಕಲಗೇರ, ಮಾಬುಸಾಬ ಮುಲ್ಲಾ, ಆರೂಢ ಕರೆಣ್ಣನವರ, ಡಿ.ಎ.ಮಾಂಗ, ಆರ್.ಕೆ.ಬಡಂಕರ, ಎಂ.ಎಸ್.ಚಿಕ್ಕಮಠ, ರವಿ ಗೋಮಪ್ಪನವರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *