Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ್ದ ಕಳ್ಳನನ್ನ “ಮಹಾರಾಷ್ಟ್ರ”ದಲ್ಲಿ ಬಂಧಿಸಿದ ಪೊಲೀಸರು…

1 min read
Spread the love

ಹುಬ್ಬಳ್ಳಿ: ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಲ್ಕು ಅಂಗಡಿಗಳಲ್ಲಿ ಕಳ್ಳತನ ಮಾಡಿ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ  ಅಂತರ್ ರಾಜ್ಯ ಆರೋಪಿಯನ್ನ ಬಂಧನ ಮಾಡುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯನ್ನ ಮಹಾರಾಷ್ಟ್ರದ ಅಕ್ಕಲಕೋಟೆಯ ಮಹೇಶ ಪೂಜಾರಿ ಎಂದು ಗುರುತಿಸಲಾಗಿದ್ದು, ಆರೋಪಿಯಿಂದ 104000 ನಗದು ಹಾಗೂ ಕಳ್ಳತನಕ್ಕೆ ಬಳಸಿದ್ದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.

ಇನ್ಸಪೆಕ್ಟರ್ ಎಂ.ಎಸ್.ಹೂಗಾರ, ಪಿಎಸ್ಐ ಮಲ್ಲಿಕಾರ್ಜುನ ಹೊಸೂರ, ಸಿಬ್ಬಂದಿಗಳಾದ ಎಸ್.ವಿ.ಯರಗುಪ್ಪಿ, ಪ್ರಕಾಶ ಕಲಗುಡಿ, ಗುಳೇಶ ಎಚ್.ಎಂ, ಮಂಜುನಾಥ ಹಾಲವರ, ಎಸ್.ಬಿ.ಯಳವತ್ತಿ, ರೇಣಪ್ಪ ಶಿಕ್ಕಲಗಾರ, ತರುಣ ಗಡ್ಡದವರ, ಅರುಣ ಡೊಳ್ಳಿನ, ಆರೂಢ ಕರೆಣ್ಣನವರ, ಜ್ಞಾನೇಶ ಮಾಂಗ, ತಾಂತ್ರಿಕ ವರ್ಗದ ಎಂ.ಜಿ.ಚಿಕ್ಕಮಠ ಕಾರ್ಯಾಚರಣೆ ನಡೆಸಿದ್ದರು.

ಉಪನಗರ ಠಾಣೆ ಪೊಲೀಸರ ಕಾರ್ಯಾಚರಣೆಗೆ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಶ್ಲಾಘಿಸಿದ್ದಾರೆ.

 


Spread the love

Leave a Reply

Your email address will not be published. Required fields are marked *