ಹುಬ್ಬಳ್ಳಿಯಲ್ಲಿ ಗಳಗಳನೇ ಅತ್ತ “30 ವರ್ಷ” ಸೇವೆ ಸಲ್ಲಿಸಿದ ಶಿಕ್ಷಕ…!

ಹುಬ್ಬಳ್ಳಿ: ಕಳೆದ ಮೂವತ್ತು ವರ್ಷದಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದವರಿಗೆ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪ್ರೆಸ್ ಕ್ಲಬ್ ನಲ್ಲಿ ಗಳಗಳನೇ ಅತ್ತ ಪ್ರಕರಣ ಇಂದು ನಡೆದಿದೆ.
ಏನಾಯ್ತು ಇಲ್ಲಿದೆ ಕೇಳಿ…
ಹುಬ್ಬಳ್ಳಿ ವಿಜಯನಗರದ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಇವರನ್ನೇ ಟಾರ್ಗೆಟ್ ಮಾಡಿ, ಗಜಾನನ ಅಣ್ವೇಕರ ಎಂಬುವವರು ಜೀವ ಬೆದರಿಕೆ ಹಾಕಿದ್ದಾರೆ. ಇವರನ್ನ ಬಂಧನ ಮಾಡುವಂತೆ ಮನವಿ ಮಾಡಿಕೊಂಡರು.

ಘಟನೆ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಇದಾದ ನಂತರವೂ ಧಮಕಿ ಹಾಕುತ್ತಿರುವುದು ಕಂಡು ಬರುತ್ತಿದೆ.