ಮಹಾ ಶಿಕ್ಷಕರ ಸಂಘದ ಜಿಲ್ಲಾ ಮಹಾ ಪ್ರಕಾ ಮಾಡಿದ ಘನಂದಾರಿ ಕೆಲಸವೇನು…! ನೋಡಿ….ಬಹಿರಂಗ ಕ್ಷಮೆಯಾಚಿಸುವರೇ..!?
1 min readಧಾರವಾಡ: ಇಂತಹದೊಂದು ಮಾಹಿತಿಯನ್ನ ಕೊಡುವ ಪರಿಸ್ಥಿತಿಯನ್ನ ತಂದಿಟ್ಟ ಮಹಿನೀಯರಿಗೆ ನಮಸ್ಕಾರ ಹೇಳುತ್ತಲೇ, ಏನು ನಡೆದಿದೆ ಎಂಬುದನ್ನ ತಿಳಿಸುವ ಮಾಹಿತಿಯನ್ನ ನಿಮ್ಮ ಮುಂದಿಡುತ್ತಿದ್ದೇವೆ. ಪೂರ್ಣವಾಗಿ ಓದಿ..
ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಕಚೇರಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಪದಾಧಿಕಾರಿಗಳ ಜೊತೆಗೆ ಒಂದಿಷ್ಟು ಶಿಕ್ಷಕರು ಮನವಿಯನ್ನ ಕೊಡಲು ಹೋಗಿದ್ದರು. ಆ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖುರ್ಚಿಯನ್ನು ಆಕ್ರಮಿಸಿಕೊಂಡಂತೆ ನಿಂತ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಹುತೇಕ ಶಿಕ್ಷಕರ ಬೇಸರಕ್ಕೆ ಕಾರಣವಾಗಿದ್ದಾರೆ.
ತಾವು ತಮ್ಮ ಸ್ಥಾನದ ಗೌರವವನ್ನ ಮರೆತು ಹಿರಿಯ ಅಧಿಕಾರಿಗಳ ಮುಂದೆ ಹೀಗೆ ಮಾಡುವುದು ಎಷ್ಟು ಒಳಿತು ಎನ್ನುವ ಪ್ರಶ್ನೆ ಮೂಡಿದೆ. ಬಿಇಓ ಉಮೇಶ ಬೊಮ್ಮಕ್ಕನವರ ಅವರನ್ನ ನೋಡದವರಿಗೆ, ರಾಜಶೇಖರ ಹೊನ್ನಪ್ಪನವರೇ ಬಿಇಓ ಖುರ್ಚಿಯಲ್ಲಿ ನಿಂತು, ಬಿಇಓ ಥರ ಕಾಣಿಸುತ್ತಾರೆ.
ಹೀಗೇಲ್ಲ ನಡೆಯುವಾಗ ಧಾರವಾಡ ತಾಲೂಕು ಅಧ್ಯಕ್ಷ ಅಜಿತಕುಮಾರ ದೇಸಾಯಿ, ಎನ್.ಎಸ್.ಕಮ್ಮಾರ, ಭಾರತಿ ಮನ್ನಿಕೇರಿ, ಗೀತಾ ದೊಡಡಮನಿ, ಎಲ್.ಎಲ್.ಕೇಸರಿ, ರಾಜೇಶ್ವರಿ ಸವಣೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಂತಹ ಅವಘಡಕ್ಕೆ ಕಾರಣವಾಗಿದ್ದರ ಬಗ್ಗೆ ಮಹಾ ಪ್ರಧಾನ ಕಾರ್ಯದರ್ಶಿಗಳು ತಪ್ಪಾಗಿರುವ ಬಗ್ಗೆ ತಪ್ಪೋಪ್ಪಿಗೆ ಮಾಡಿಕೊಂಡು, ಇಲಾಖೆ ಅಧಿಕಾರಿಗಳ ಗೌರವವನ್ನ ಹೆಚ್ಚಿಗೆ ಮಾಡುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.