ಶಿಕ್ಷಣ ಸಚಿವರೇ ಕಂಗ್ರಾಟ್ಸ್: ನಮ್ಮದೊಂದು ಮನವಿಯಿದೆ ನೋಡ್ತೀರಾ…!

ಹುಬ್ಬಳ್ಳಿ: ನೂತನ ಶಿಕ್ಷಣ ಸಚಿವರಿಗೆ ಗ್ರಾಮೀಣ ಶಿಕ್ಷಕರ ಸಂಘವೂ ಅಭಿನಂದನೆ ಸಲ್ಲಿಸುವ ಜೊತೆಗೆ ತಮ್ಮ ನೋವನ್ನ ಹೇಳಿಕೊಂಡಿದೆ. ಇದನ್ನ ಪರಿಗಣಿಸುವ ಅವಶ್ಯಕತೆಯಿದೆ.

ಮಾನ್ಯರೆ,
ವಿಷಯ: ನೂತನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿ ಆಯ್ಕೆಯಾಗಿರುವ ತಮಗೆ ಅಭಿನಂದನೆ ಸಲ್ಲಿಸಿ ಪತ್ರ
ಸನ್ಮಾನ್ಯ ಶ್ರೀ ಬಿ ಸಿ ನಾಗೇಶರವರು ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು ತಾವು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳು *ಹಿರಿಯ ರಾಜಕಾರಣಿಗಳು ಆದ ತಮಗೆ ನಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ದೊರೆತಿರುವುದು ಹರ್ಷದ ಸಂಗತಿಯಾಗಿದೆ. ಆದ್ದರಿಂದ ನಾಡಿನ ಸಮಸ್ತ ಶಿಕ್ಷಕರ ಪರವಾಗಿ ತಮಗೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತಾ

ಶಿಕ್ಷಕರ ಜ್ವಲಂತ ಸಮಸ್ಯೆಯಾದ ವರ್ಗಾವಣೆಯಲ್ಲಿ ಈ ಕೆಳಕಂಡ ಅಂಶಗಳನ್ನು ಪರಿಗಣಿಸಿ ಪ್ರಸ್ತುತ ವರ್ಷದ ವರ್ಗಾವಣೆ ನಡೆಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ನಮ್ಮ ಸಂಘವು ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸುತ್ತದೆ.

ಪ್ರಸ್ತುತ ವರ್ಷದ ವರ್ಗಾವಣೆಯಲ್ಲಿ ಆಗಬೇಕಾಗಿದೆ ಬದಲಾವಣೆಗಳು.
1) ಶಿಕ್ಷಕರು ಮಾನಸಿಕ ನೆಮ್ಮದಿಯಿಂದ ಇದ್ದರೆ ಮಾತ್ರ ತರಗತಿ ಬೋಧನೆ ಹಾಗೂ ಕಲಿಕೆ ಗುಣಮಟ್ಟದಿಂದ ಕೂಡಿರುತ್ತದೆ ಎಂಬ ಶೈಕ್ಷಣಿಕ ಮನೋವಿಜ್ಞಾನಿಗಳ ಮಾತಿನಂತೆ ಕಳೆದ 10-15 ವರ್ಷಗಳಿಂದ ತಮ್ಮ ಕುಟುಂಬದಿಂದ ದೂರವಿರುವ ಅಂತರ್ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಮಾನಸಿಕ ನೆಮ್ಮದಿ ವರ್ಗಾವಣೆ ನಿಯಮಗಳಿಂದ ಕೆಟ್ಟು ಹೋಗಿದೆ ತಾವುಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕುರಿತು ಪಶ್ಚಿಮ ಬಂಗಾಳ ಮಾದರಿಯಲ್ಲಿ ಒಂದು ಬಾರಿ ಅವರವರ ಜಿಲ್ಲೆಗೆ ಇದೆ ವರ್ಷ ವರ್ಗಾವಣೆ ಮಾಡಿ ನೆಮ್ಮದಿಯುಕ್ತ ತರಗತಿ ವಾತಾವರಣ ನಿರ್ಮಾಣ ಮಾಡಿಕೊಡಬೇಕೆಂದು ವಿನಂತಿಸುತ್ತೇವೆ.
2) ಈ ಹಿಂದಿನ ಸರ್ಕಾರಗಳು ಕಾಲ ಕಾಲಕ್ಕೆ ಶಿಕ್ಷಕರ ನೇಮಕಾತಿ ಮಾಡದೆ ಇರುವುದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿದ್ದು 25% ಖಾಲಿ ಹುದ್ದೆ ಇರುವಲ್ಲಿ ಶಿಕ್ಷಕರು ವರ್ಗಾವಣೆಗೆ ಅರ್ಹರಲ್ಲ ಎಂಬ ನಿಯಮವು ಅವೈಜ್ಞಾನಿಕ ನಿಯಮವಾಗಿದೆ ಆದ್ದರಿಂದ ಈ ನಿಯಮ ಕೈ ಬಿಟ್ಟು ಅರ್ಜಿ ಸಲ್ಲಿಸಿದ ಎಲ್ಲ ಶಿಕ್ಷಕರಿಗೆ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಿ ಕೊಡಬೇಕೆಂದು ವಿನಂತಿಸುತ್ತೇವೆ.
3) ಈ ಹಿಂದೆ 6&7 ನೇ ತರಗತಿಗಳಿಗೆ ಹಿಂದಿ ವಿಷಯ ಬೋಧನೆ ಮಾಡುತ್ತಿದ್ದ ಶಿಕ್ಷಕರನ್ನು 1-5 ನೇ ತರಗತಿಗಳಿಗೆ ಹಿಂಬಡ್ತಿ ನೀಡಿದ್ದಾರೆ ಅಷ್ಟೇ ಅಲ್ಲದೆ ವರ್ಗಾವಣೆಯಲ್ಲಿ ಅವರ ವಿಷಯದ ಹುದ್ದೆಗಳೆ ಇಲ್ಲದೆ ಅತಂತ್ರ ಸ್ಥಿತಿ ತಲುಪಿದ್ದು 1-5 ನೇ ತರಗತಿಯ ಭಾಷಾ ಹುದ್ದೆ ಆಯ್ಕೆ ಮಾಡಿಕೊಳ್ಳಲು ಅವರಿಗೆ ಅವಕಾಶ ನೀಡಬೇಕೆಂದು ವಿನಂತಿಸುತ್ತೇವೆ.
4) ಗ್ರಾಮೀಣ ಪ್ರದೇಶದಲ್ಲಿ ನಿರಂತರ 15 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಶಹರ ಶಾಲೆಗಳಿಗೆ ವರ್ಗಾವಣೆ ಭಾಗ್ಯ ಕರುಣಿಸಲು ವಿನಂತಿಸುತ್ತೇವೆ.
ಈ ಮೇಲ್ಕಂಡ ನಮ್ಮ ಬೇಡಿಕೆಗಳನ್ನು ಪ್ರಸ್ತುತ ವರ್ಷದ ವರ್ಗಾವಣೆ ಪ್ರಕ್ರಿಯೆಯಲ್ಲಿ ಈಡೇರಿಸಲು ತಮ್ಮಲ್ಲಿ ಆಗ್ರಹಿಸುತ್ತಾ ನೂತನ ಸಚಿವರಾದ ತಮಗೆ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೆ ರಾಜ್ಯಾಧ್ಯಕ್ಷರಾದ ಅಶೋಕ ಎಮ್ ಸಜ್ಜನ ಮಹಾಪ್ರಧಾನಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಉಪ್ಪಿನ, ಗೌರವಾಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ. ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ ಆರ್ ಕೆ. ಕೋಶಾಧ್ಯಕ್ಷರಾದ ಎಸ್ ಎಫ್ ಪಾಟೀಲ್ ಉಪಾಧ್ಯಕ್ಷರುಗಳಾದ ಶ್ರೀಕಾಂತ್ .ಮುನವಳ್ಳಿ .ಮಹಮ್ಮದ್ ರಫಿ.* ಹನುಮಂತಪ್ಪ .ನಾಗರಾಜ್ .ಕುಸುಮಾ. ಬಂಡಿವಡ್ಡರ್ .ಲಕ್ಷ್ಮೀದೇವಮ್ಮ .ಸಹ ಕಾರ್ಯದರ್ಶಿಗಳಾದ ಶರಣಬಸವ ಬನ್ನಿಗೋಳ ಆರ್ ಎಂ ಕುರ್ಲಿ .ನಾಗಶೆಟ್ಟಿ .ಸುಧಾ .ಶಿವಲೀಲಾ. ಫೀರ್ ಸಾಬ್ ನದಾಫ್. ರವಿ ಬಂಗೆನ್ನವರ .ಕಲ್ಪನಾ .ದೇವಿಕಾ ಶಾಂತಮ್ಮ ಮುಂತಾದವರು ಆಗ್ರಹಿಸಿದ್ದಾರೆ.
ಗೌರವಾನ್ವಿತ ವಂದನೆಗಳೊಂದಿಗೆ