Posts Slider

Karnataka Voice

Latest Kannada News

“ಸಮ್ಮತಿ”ಯನ್ನ ಬದಲಿಸಿ “ಅಸಮ್ಮತಿ” ಮಾಡಿದ್ದು ಯಾರೂ: ಶಿಕ್ಷಕರ ಕೋಟ್ಯಾಂತರ ಹಣ ಏನಾಗುತ್ತಿದೆ…!

1 min read
Spread the love

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಸಂಘಕ್ಕೆ ಶಿಕ್ಷಕರಿಂದ ವಾರ್ಷಿಕ ಸದಸ್ಯತ್ವ ಶುಲ್ಕವನ್ನಾಗಿ ಪಡೆಯುತ್ತಿರುವುದಕ್ಕೆ ಸಮ್ಮತಿ ಪತ್ರ ಪಡೆದು ವೇತನದಲ್ಲಿ ಕಡಿತಗೊಳಿಸುವಂತೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಎಂ.ಸಜ್ಜನ, ಗೌರವಾಧ್ಯಕ್ಷ ಎಲ್.ಐ.ಲಕ್ಕಮ್ಮನವರ ಸೇರಿದಂತೆ ಸಂಘದ ಪದಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಬೆಂಗಳೂರು: ಸರಕಾರದ ಮೂಲ ಆದೇಶವನ್ನೇ ಗಾಳಿಗೆ ತೂರಿ ಪ್ರತಿವರ್ಷ ಹಣವನ್ನ ಸಂಗ್ರಹಿಸಲು ರಾಜ್ಯ ಶಿಕ್ಷಕರ ಸಂಘ ಮುಂದಾಗಿದ್ದು, ಅದಕ್ಕೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರಾ ಎಂಬ ಸಂಶಯ ಬರುತ್ತಿದ್ದು, ಕೋಟ್ಯಾಂತರ ರೂಪಾಯಿ ಎಲ್ಲಿಗೆ ಹೋಗುತ್ತಿದೆ ಎಂದು ಗೊತ್ತಾಗುತ್ತಿಲ್ಲವಾಗಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವೂ ಸಂಘದ ಹೆಸರಿನಲ್ಲಿ ಪ್ರತಿವರ್ಷ 200 ರೂಪಾಯಿಯನ್ನ ಸದಸ್ಯತ್ವ ಶುಲ್ಕವನ್ನ ಪಡೆಯುತ್ತಿದೆ. ಆದರೆ, ಇದು ಯಾವುದೇ ಶಿಕ್ಷಕರ ಸಮ್ಮತಿ ಪತ್ರ ಪಡೆಯದೇ ನಡೆಯುತ್ತಿರುವುದು ಶಿಕ್ಷಕ ವಲಯದಲ್ಲಿ ಸಾಕಷ್ಟು ಗೊಂದಲವನ್ನ ಸೃಷ್ಟಿ ಮಾಡಿದೆ.

ಕರ್ನಾಟಕ ಸರಕಾರ ಈ ಬಗ್ಗೆ ಸ್ಪಷ್ಟವಾದ ಆದೇಶವನ್ನ ಮಾಡಿದ್ದು, ಹಣ ಕಟಾವಣೆ ಮಾಡಬೇಕಾದರೇ, ಆಯಾ ಶಿಕ್ಷಕರ ಸಮ್ಮತಿ ಪತ್ರವನ್ನ ಪಡೆಯಬೇಕೆಂದು ಹೇಳಿದೆ. ಆದರೆ, ಚಾಣಾಕ್ಷರು ‘ಸಮ್ಮತಿ’ ಬದಲಾಗಿ ಯಾರೂ ಬೇಡವೆನ್ನುವರು ‘ಅಸಮ್ಮತಿ’ ಕೊಡಿ ಎಂದು ಹೇಳುವ ಮೂಲಕ, ಕೆಲವು ಅಧಿಕಾರಿಗಳು ಹಣದ ಹಿಂದೆ ಇದ್ದಾರಾ ಎಂಬ ಸಂಶಯ ಆರಂಭವಾಗಿದೆ.

ರಾಜ್ಯದಲ್ಲಿ ಸುಮಾರು 1ಲಕ್ಷ 86 ಸಾವಿರ ಶಿಕ್ಷಕರಿದ್ದು, ಪ್ರತಿಯೊಬ್ಬರಿಂದಲೂ 200 ರೂಪಾಯಿಯನ್ನ ಸಂಘ ಪಡೆದರೇ, ಒಟ್ಟು 3ಕೋಟಿ 72ಲಕ್ಷ ರೂಪಾಯಿಯನ್ನ ಸಂಗ್ರಹ ಮಾಡಲಾಗುತ್ತಿದೆ. ಈ ಹಣ ಯಾವ ಕಾರಣಕ್ಕೆ ಉಪಯೋಗವಾಗುತ್ತಿದೆ ಎಂಬುದು ಇಲ್ಲಿಯವರೆಗೆ ಬಹುತೇಕ ಶಿಕ್ಷಕರಿಗೆ ಗೊತ್ತೆಯಿಲ್ಲ.

ಶಿಕ್ಷಕರ ಸಂಘದ ಹೆಸರಿನಲ್ಲಿ ಹಣ ಕಟಾವಣೆ ಮಾಡಬೇಕಾದರೇ, ಸಮ್ಮತಿ ಪತ್ರ ಪಡೆದು ಕೊಡಿ. ಇಲ್ಲದಿದ್ದರೇ ಸರಕಾರದ ನಿಯಮಗಳನ್ನ ಗಾಳಿಗೆ ತೂರುವ ‘ವ್ಯವಹಾರ’ ನಡೆಸುವುದಿದ್ದರೇ ನಡೆಯಲಿ ಎಂಬುದು ಹಲವರ ದೂರಾಗಿದೆ.

ಇಂತಹ ವ್ಯವಸ್ಥೆಯಲ್ಲಿ ಅಧಿಕಾರಿಗಳು ಕೂಡಾ ಸರಕಾರದ ನಿಯಮಗಳನ್ನ ಗಾಳಿಗೆ ತೂರಿ, ಹಣವನ್ನ ಕಟಾವಣೆ ಮಾಡಲಾಗುತ್ತಿದೆ. ಇನ್ನೂ ಮುಂದಾದರೂ, ಸರಕಾರದ ನಿಯಮಗಳನ್ನ ಪಾಲನೆ ಮಾಡುವಲ್ಲಿ ಅಧಿಕಾರಿಗಳು ಮುಂದಾಗುತ್ತಾರಾ ಎಂದು ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *