ಸಲಿಂಗ ಕಾಮದಲ್ಲಿ ತೊಡಗಿದ್ದ ಶಿಕ್ಷಕನ ಕೊಲೆ: ಮೂವರ ಬಂಧನ…!

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದ್ದ ಶಿಕ್ಷಕ ವಿಶ್ವನಾಥ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀಕಾಂತ್, ಮನು ಹಾಗೂ ಮಂಜುನಾಥ ಬಂಧಿತ ಆರೋಪಿತರಾಗಿದ್ದಾರೆ.

ಜೂನ್ 4 ರಂದು ರಾತ್ರಿ ಶಿಕ್ಷಕ ವಿಶ್ವನಾಥರನ್ನು ಕೊಲೆ ಮಾಡಲಾಗಿತ್ತು. ಸಲಿಂಗ ಕಾಮದಲ್ಲಿ ತೊಡಗಿದ್ದಾಗ ಶಿಕ್ಷಕ ವಿಶ್ವನಾಥನನ್ನು ಕೊಲೆ ಮಾಡಾಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಆರೋಪಿತರು ಶಿಕ್ಷಕ ವಿಶ್ವನಾಥನನ್ನು ಬೆತ್ತಲೆಗೊಳಿಸಿ ಕೊಲೆ ಮಾಡಿದ್ದರು.
ಸಲಿಂಗ ಕಾಮಿಯಾಗಿದ್ದ ವಿಶ್ವನಾಥ್ ಸಲಿಂಗ ಕಾಮಕ್ಕಾಗಿ ಇಬ್ಬರು ಯುವಕರನ್ನು ಕರೆಸಿಕೊಂಡಿದ್ದರು. ಆಗ ಈ ಕೃತ್ಯ ಎಸಗಲಾಗಿತ್ತು. ಈ ಕುರಿತು ಗೌರಿಬಿದನೂರಿನ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.