ಗ್ರಾಮೀಣ ಶಿಕ್ಷಕರ ಸಂಘದ ಮನವಿ: ವರ್ಗಾವಣೆ, ಬೇಸಿಗೆ ರಜೆ- ಸಭಾಪತಿ ಸ್ಥಳದಲ್ಲೇ ಯಾರಿಗೆ ಮಾತನಾಡಿದ್ದು..!

ಹುಬ್ಬಳ್ಳಿ: ನೆನಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆ ಬಗ್ಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮನವಿಗೆ ಸ್ಪಂಧಿಸಿದ ಬಸವರಾಜ ಹೊರಟ್ಟಿಯವರು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗೆ ಫೋನ್ ಮಾಡಿ, ಬೇಗನೇ ಕ್ರಮ ತೆಗೆದುಕೊಳ್ಳಿ ಎಂದು ಆದೇಶ ಮಾಡಿದ ಘಟನೆ ನಡೆಯಿತು.
ಮನವಿ ಪಡೆದ ಬಸವರಾಜ ಹೊರಟ್ಟಿಯವರು ಹೇಳಿದ್ದು, ಮತ್ತು ಅಧಿಕಾರಿಗೆ ಮಾತನಾಡಿರೋ ವೀಡಿಯೋ ಇಲ್ಲಿದೆ ನೋಡಿ..
ಗ್ರಾಮೀಣ ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ನೇತೃತ್ವದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನ ಭೇಟಿ ಮಾಡಿ, ಶಿಕ್ಷಕರ ವರ್ಗಾವಣೆಯ ನೆನೆಗುದಿಗೆ ಬೀಳುತ್ತಿದ್ದು, ಇದರಿಂದ ಶಿಕ್ಷಕ ಕುಟುಂಬಗಳು ಸಂಕಷ್ಟ ಅನುಭವಿಸುತ್ತಿವೆ ಎಂದು ಮನವಿ ಮಾಡಿಕೊಂಡರು.
ಶಿಕ್ಷಕರ ಮನವಿಯನ್ನ ಪಡೆದ ಬಸವರಾಜ ಹೊರಟ್ಟಿಯವರು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಫೋನ್ ಮಾಡಿ ಮಾತಾಡಿದರು. ತಕ್ಷಣವೇ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಕೊಡುವಂತೆಯೂ ಹೇಳಿದರು.
ಶಾಲೆಗಳ ಬೇಸಿಗೆ ರಜೆಯ ಬಗ್ಗೆಯೂ ಕ್ರಮ ಜರುಗಿಸುವ ಕುರಿತು ಮಾತನಾಡುವುದಾಗಿ ಬಸವರಾಜ ಹೊರಟ್ಟಿಯವರು ಭರವಸೆ ನೀಡಿದರು. ಈ ಸಮಯದಲ್ಲಿ ಸಂಘದ
ಶೀಘ್ರ ವರ್ಗಾವಣೆ ಪ್ರಾರಂಭಿಸಲು ಹಾಗೂ ಶಾಲೆಗಳಿಗೆ ರಜೆ ಘೋಷಿಸಲು ಬಸವರಾಜ ಹೊರಟ್ಟಿಯವರ ಮೂಲಕ ಮುಖ್ಯ ಮಂತ್ರಿಗಳವರಿಗೆ ಗ್ರಾಮೀಣ ಶಿಕ್ಷಕರ ಸಂಘದ ಮನವಿ
ದಿನಾಂಕ:2-4-2021 ರಂದು ಕರ್ನಾಟಕ ಘನ ಸರ್ಕಾರದ ವಿಧಾನ ಪರಿಷತ್ ಸಭಾಪತಿಗಳಾದ ಮಾನ್ಯ ಶ್ರೀ ಬಸವರಾಜ ಎಸ್ ಹೊರಟ್ಟಿ ರವರ ಹುಬ್ಬಳ್ಳಿಯ ನಿವಾಸಕ್ಕೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ರಾಜ್ಯಾಧ್ಯಕ್ಷರಾದ ಅಶೋಕ ಎಮ್ ಸಜ್ಜನ ರವರ ನೇತೃತ್ವದಲ್ಲಿ ಪ್ರಸ್ತುತ ಜಟಿಲ ಸಮಸ್ಯೆ ಯಾಗಿರುವ ವರ್ಗಾವಣೆಯನ್ನು ಶೀಘ್ರವಾಗಿ ಪ್ರಾರಂಭಿಸುವ ಕುರಿತು ಹಾಗೂ ಶಾಲೆಗಳನ್ನು ಕೊರೊನಾ ಹಾಟ್ ಸ್ಪಾಟ್ ಮಾಡದೇ ಪರೀಕ್ಷೆಗಳನ್ನು ಶೀಘ್ರವಾಗಿ ಮುಗಿಸಿ ,ಬೇಸಿಗೆ ರಜೆ ಸಾರಲು ಮತ್ತು ಬೆಂಗಳೂರು ನಗರ ಜಿಲ್ಲೆಯಲ್ಲಿ ಬೋಧನೆಯನ್ನು ಸ್ಥಗಿತಗೊಳಿಸಿರುವಂತೆ ರಾಜ್ಯಾದ್ಯಂತ ಕರ್ನಾಟಕದ ಶಾಲೆಗಳಲ್ಲಿ ಕೂಡಾ ಬೋಧನೆಯನ್ನು ಸ್ಥಗಿತಗೊಳಿಸಿ ಕೊರೋನಾದಿಂದ ಮಕ್ಕಳನ್ನು ದೂರ ಗೊಳಿಸಬೇಕು 2 ಕೋಟಿ ಮಕ್ಕಳು 5 ಲಕ್ಷ ಶಿಕ್ಷಕರು 50 ಸಾವಿರ ಶಾಲೆಗಳ ಹಿತ ರಕ್ಷಣೆಯನ್ನು ಮಾಡಬೇಕೆಂದು ಬೃಹತ್ ನಿಯೋಗದೊಂದಿಗೆ ಮನವಿ ಮಾಡಿಕೊಂಡಾಗ ಸನ್ಮಾನ ವಿಧಾನಪರಿಷತ್ ಸಭಾಪತಿಗಳು ತಕ್ಷಣ ಸ್ಪಂದಿಸಿ, ಸ್ಥಳದಲ್ಲಿಯೇ ರಾಜ್ಯ ಹಂತದ ಜನ ನಾಯಕರುಗಳಿಗೆ ಹಾಗೂ ರಾಜ್ಯ ಹಂತದ ಅಧಿಕಾರಿ ವರ್ಗದವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಎಲ್ಲಾ ಬೇಡಿಕೆಗಳನ್ನು ,ಶೀಘ್ರವಾಗಿ ವರ್ಗಾವಣೆಯ ಪ್ರಕ್ರಿಯೆಯನ್ನು ನಾಲ್ಕಾರು ದಿನಗಳಲ್ಲಿ ಪ್ರಾರಂಭಿಸುವ ಕುರಿತಂತೆ ಮಾಹಿತಿಯನ್ನು ನಮಗೆ ದೊರಕಿಸಿಕೊಟ್ಟರು
ಹಾಗೆಯೇ ಫಲಿತಾಂಶ ಘೋಷಣೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಸ್ಥಳದಲ್ಲಿಯೇ ಸ್ಪಂದಿಸಿ ವಿವರಿಸಿದರು ಸಂಘದ ಬೃಹತ್ ನಿಯೋಗದಲ್ಲಿ ರಾಜ್ಯಾಧ್ಯಕ್ಷರಾದ ಅಶೋಕ ಸಜ್ಜನ್ ಕಾರ್ಯಾಧ್ಯಕ್ಷರಾದ ಶರಣಪ್ಪ ಗೌಡ ಆರ್.ಕೆ. ಗೌರವಾಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಕೋಶಾಧ್ಯಕ್ಷರಾದ ಎಸ್ ಎಫ್ ಪಾಟೀಲ್ ಉಪಾಧ್ಯಕ್ಷರಾದ ಗೋವಿಂದ ಜುಜಾರೆ ಸುರೇಶ ಅರಳಿ ಹಾಗೂ ಡಿ.ಟಿ.ಭಂಡಿವಡ್ಡರ ಜಿಲ್ಲಾಧ್ಯಕ್ಷರಾದ ಅಕ್ಬರಲಿ ಸೊಲ್ಲಾಪೂರ ಆನಂದ ದುಂದೂರ. ಎ.ಆಯ್.ಮುಳಗುಂದ.ಡಾ.ರಾಮು ಮೂಲಗಿ, ಎಸ್.ಸಿ.ಹೊಳೆಯಣ್ಣವರ, ಕೆ.ಕೆ.ಚಿಪ್ಪಾಡಿ, ಬಿ.ಕೆ.ಹಾಲವರ, ಬಿ.ವಿ.ಅಂಗಡಿ ವಾಯ್.ಎಫ್.ಕೆಂಪಣ್ಣವರ.ಬಿ.ಎಚ್.ಕಲ್ಲಣ್ಣವರ.ನಿಯೋಗದಲ್ಲಿ ಪಾಲ್ಗೊಂಡಿದ್ದರು ಮನವಿಯನ್ನು ಅರ್ಪಿಸಿದರು.