Karnataka Voice

Latest Kannada News

ಬಿಇಓ ಪತ್ನಿ ಸೇರಿ ಐವರು ಹಾಲಿ, ಇಬ್ಬರು ನಿವೃತ್ತ ಶಿಕ್ಷಕರು ಕೊರೋನಾಗೆ ಬಲಿ…

Spread the love

ಹುಬ್ಬಳ್ಳಿ: ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಕ ಸಮುದಾಯದ ಹಲವರು ಇನ್ನಿಲ್ಲವಾಗುತ್ತಿದ್ದಾರೆ. ಆರೋಗ್ಯವಾಗಿದ್ದ ಹಲವರು ಈ ರೋಗಕ್ಕೆ ಬಲಿಯಾಗುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಠ್ಠಲ ದೇವಣಗಾವಿ ಅವರ ಪತ್ನಿ ಬಸಮ್ಮ ದೇವಣಗಾವಿ ಕೊರೋನಾದಿಂದ ಸಾವಿಗೀಡಾಗಿದ್ದು, ತಾಲೂಕಿನ ಶಿಕ್ಷಕ ಸಮೂಹದಲ್ಲಿ ಆತಂಕ ಮೂಡಿದೆ.

ಬೆಂಗಳೂರಿನ ಹೆಬ್ಬಾಳ ಸಿಆರ್ ಪಿ ಬಂಟನೂರ ಗ್ರಾಮದ ಶಿಕ್ಷಕ ಸುರೇಶ ನಿಂಗಪ್ಪ ಸೊನ್ನದ ಅವರು ಕೊರೋನಾಗೆ ಬಲಿಯಾಗಿದ್ದು, ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರಾದರೂ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಶಿರಸಿಯ ಪ್ರೌಢಶಾಲೆಯ ಶಿಕ್ಷಕ ಕಾಶಿನಾಥ ಮ್ಯಾಗೇರಿ ಅವರ ತಾಯಿ ತೀರಿಕೊಂಡ ಕೆಲವೇ ಸಮಯದಲ್ಲಿ ಕೊರೋನಾದಿಂದಲೇ ಸಾವಿಗೀಡಾಗಿದ್ದಾರೆ. ತಾಯಿ ಅನಾರೋಗ್ಯಗೊಂಡ ಹಿನ್ನೆಲೆಯಲ್ಲಿ ಹೋದಾಗ, ಇವರಿಗೂ ಕೊರೋನಾ ತಗುಲಿತ್ತು.

ಧಾರವಾಡ ಗ್ರಾಮೀಣ ಭಾಗದ ಹಳ್ಳಿಗೇರಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ದೇವೆಂದ್ರ ಲಮಾಣಿ ಅವರು ಕೂಡಾ, ಕೊರೋನಾಗೆ ಬಲಿಯಾಗಿದ್ದು, ನಿರಂತರವಾಗಿ ಗ್ರಾಮೀಣ ಪ್ರದೇಶಕ್ಕೆ ಹೋಗಿ ಬರುವ ಸಮಯದಲ್ಲಿ ಕೊರೋನಾ ತಗುಲಿತ್ತು.

ಚಿತ್ರದುರ್ಗ ತಾಲೂಕಿನ ಐನಳ್ಳಿ ಕುರುಬಟ್ಟಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಓಂಕಾರಪ್ಪ ಅವರು ಕೂಡಾ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಶಿಕ್ಷಕರು ಸಾವಿಗೀಡಾಗಿದ್ದಾರೆ.

ಧಾರವಾಡದ ತೇಜಸ್ವಿನಗರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ಎಫ್. ಹೊಸಮನಿ ಅವರು ಕೂಡಾ, ಕೊರೋನಾದಿಂದ ಗುಣಮುಖರಾಗದೇ ಸಾವಿಗೀಡಾಗಿದ್ದಾರೆ.

ಈ ಘಟನೆಗಳಲ್ಲದೇ ನಿವೃತ್ತ ಶಿಕ್ಷಕರಾದ ಹುಬ್ಬಳ್ಳಿ ತಾಜನಗರದ ಎಸ್.ಎಂ.ನದಾಫ ಅವರು ಕೋವಿಡ್-19ಗೆ ಬಲಿಯಾಗಿದ್ದಾರೆ. ಧಾರವಾಡದ ನಿವೃತ್ತ ಶಿಕ್ಷಕ ಅಬ್ದುಲರಹಿಮಾನ ಸದರಬಾಯಿ ಕೂಡಾ ಕೋವಿಡ್-19ಗೆ ಪ್ರಾಣವನ್ನ ಕಳೆದುಕೊಂಡಿದ್ದಾರೆ.

ಇಡೀ ದೇಶವನ್ನ ನಡುಗಿಸುತ್ತಿರುವ ಕೊರೋನಾ, ಶಿಕ್ಷಕ ಸಮುದಾಯವನ್ನ ಬೆಚ್ಚಿ ಬೀಳಿಸುತ್ತಿದೆ. ಶಿಕ್ಷಕರು ಕೂಡಾ ಜಾಗೃತೆಯಿಂದ ಬದುಕು ಸಾಗಿಸುವುದು ಮುಖ್ಯವಾಗಿದೆ. ಶಿಕ್ಷಕರ ಸಾವಿಗೆ ಗ್ರಾಮೀಣ ಸಂಘವೂ ತೀವ್ರ ಸಂತಾಪವನ್ನ ಸೂಚಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *