Posts Slider

Karnataka Voice

Latest Kannada News

Spread the love

ಹುಬ್ಬಳ್ಳಿ: ಕೊರೋನಾ ಎರಡನೇಯ ಅಲೆ ಆರಂಭಗೊಂಡ ನಂತರ ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ಶಿಕ್ಷಕರು ಕೊರೋನಾದಿಂದಲೇ ಸಾವಿಗೀಡಾಗಿದ್ದಾರೆಂದು ಹೇಳಲಾಗುತ್ತಿದ್ದು, ಅವರನ್ನ ಇಲ್ಲಿಯವರೆಗೆ ಶಿಕ್ಷಕರನ್ನ ಕೊರೋನಾ ವಾರಿಯರ್ ಎಂದು ಪರಿಗಣಿಸದೇ ಅನ್ಯಾಯ ಮಾಡಲಾಗುತ್ತಿದೆ ಎಂಬ ಕೂಗು ಕೇಳಿಬರತೊಡಗಿದೆ.

ಪ್ಲೇ ಸ್ಟೋರಲ್ಲಿ “ಕರ್ನಾಟಕವಾಯ್ಸ್.ಕಾಂ ಆ್ಯಪ್” ಲಭ್ಯ. ತಕ್ಷಣವೇ ಡೌನ್ ಲೌಡ್ ಮಾಡಿಕೊಳ್ಳಿ.. ನಿಮ್ಮ ಅಕ್ಕಪಕ್ಕದಲ್ಲಿ ನಡೆಯೋ ಮಾಹಿತಿ ಪಡೆದುಕೊಳ್ಳಿ…

ಸಂಪೂರ್ಣ ವೀಡಿಯೋ..

ಶಿಕ್ಷಕರ ಸಾವಿಗೆ ಸರಕಾರವಲ್ಲದೇ ಮತ್ಯಾರು ಎಂಬ ಪ್ರಶ್ನೆ ಮೂಡತೊಡಗಿದ್ದು, ನಿಗದಿತ ಸಮಯದಲ್ಲಿ ಶಿಕ್ಷಕರನ್ನ ಕೊರೋನಾ ವಾರಿಯರ್ ಎಂದು ಗುರುತಿಸುತ್ತೋ ಇಲ್ಲವೋ ಕಾದು ನೋಡಬೇಕಿದೆ.

ಈಗಾಗಲೇ ಕೋವಿಡ್ ಕರ್ತವ್ಯ  ನಿಯೋಜನೆಗೊಂಡ ಶಿಕ್ಷಕರಿಗೆ  ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಆದೇಶ ಮಾಡಬೇಕು. ಅವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಸಾಧ್ಯವಿದ್ದ ಮಟ್ಟಿಗೆ ಮನೆಯಲ್ಲಿಯೆ ಕೆಲಸ ಕಾರ್ಯಗಳ ಹಂಚಿಕೆ ಮಾಡಬೇಕೆಂದು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ್, ಗೌರವಾಧ್ಯಕ್ಷ ಎಲ್.ಐ.ಲಕ್ಕಮ್ಮನವರ, ಕೋಶಾಧ್ಯಕ್ಷ ಎಸ್. ಎಫ್. ಪಾಟೀಲ್, ಕಾರ್ಯಾಧ್ಯಕ್ಷ ಶರಣಪ್ಪ ಗೌಡ ಆರ್ .ಕೆ, ಮಹಾಪೋಷಕ ಪವಾಡಪ್ಪ ಕಾಂಬ್ಳೆ, ಉಪಾಧ್ಯಕ್ಷ  ಗೋವಿಂದ ಜುಜಾರೆ, ಹನುಮಂತಪ್ಪ ಮೇಟಿ,  ಡಿ.ಎಸ್.ಭಜಂತ್ರಿ ಕುಕನೂರ, ರಾಮಪ್ಪ ಹಂಡಿ, ಎಂ.ಐ. ಮುನವಳ್ಳಿ, ಮಹ್ಮದ್ ರಫಿ, ಡಿ.ಟಿ.ಬಂಡಿವಡ್ಡರ, ರಾಜ್ಯ ಪದಾಧಿಕಾರಿಗಳಾದ ಶರಣಬಸವ ಬನ್ನಿಗೋಳ, ಎಂ.ವಿ.ಕುಸುಮಾ, ರಾಜಶ್ರೀ ಪ್ರಭಾಕರ್, ಜಿ.ಟಿ.ಲಕ್ಷ್ಮೀದೇವಮ್ಮ, ಕಲ್ಪನಾ ಚಂದನಕರ, ರವಿ ಬಂಗೆನ್ನವರ ಶಿವರಡ್ಡಿ, ಅಶೋಕ ಬಿಸೆರೊಟ್ಟಿ, ನಾಗರಾಜ್ ಆತಡಕರ, ನಾಗರಾಜ್ ಕೆ, ರೇಖಾ ದೇವಿ, ದೇವಿಕಾ  ಕಮ್ಮಾರ  ಮುಂತಾದ ಪದಾಧಿಕಾರಿಗಳು ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಹಾಗೂ ಆರೋಗ್ಯ ಸಚಿವರಿಗೆ ಆಗ್ರಹ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *