Posts Slider

Karnataka Voice

Latest Kannada News

ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತ ಶಿಕ್ಷಕಿ ಹೃದಯಾಘಾತದಿಂದ ಸಾವು

1 min read
Spread the love

ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮುಳಗುಂದ ಪಟ್ಟಣದ ನಿವಾಸಿಯಾಗಿದ್ದ ಬಾಲೇಹೊಸೂರಿನ ದಿಂಗಾಲೇಶ್ವರ ಪ್ರೌಢಶಾಲೆಯ ಹಿಂದಿ ಶಿಕ್ಷಕಿ ಫಾತೀಮಾ ಅಣ್ಣಿಗೇರಿ ಮಧ್ಯಪ್ರದೇಶದ ಭೋಪಾಲನಲ್ಲಿ ಸ್ಕೌಟ್ ಕ್ಯಾಂಪಿಗೆ ಹೋದಾಗ ಸಾವಿಗೀಡಾದ ಘಟನೆ ನಡೆದಿದೆ.

ಸ್ಕೌಟ್ ಹಾಗೂ ಗೈಡ್ ತರಬೇತಿ ಶಿಬಿರದಲ್ಲಿ ಭಾಗವಹಿಸಲು ತೆರಳಿದ ಸಮಯದಲ್ಲಿ ತೀವ್ರ ಹೃದಯಾಘಾತದಿಂದ ಸಾವಿಗೀಡಾಗಿದ್ದು, ಪಾರ್ಥೀವ ಶರೀರವನ್ನ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತರಲಾಗಿದ್ದು, ಇಂದು ಮುಳಗುಂದಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಯಾಗಿದ್ದ ಮೃತ ಶಿಕ್ಷಕಿ, ಹಲವು ಪ್ರಶಸ್ತಿಗಳನ್ನ ಪಡೆದು ಉತ್ತಮ ಶಿಕ್ಷಕಿಯಾಗಿದ್ದರು. ಅಷ್ಟೇ ಅಲ್ಲ, ಹಲವು ವರ್ಷಗಳಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತ ಬಂದಿದ್ದರು.

ಶಿಕ್ಷಕಿ ಫಾತೀಮಾ ಅಣ್ಣಿಗೇರಿಯವರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದು, ಮತ್ತೆ ಶಿಕ್ಷಕಿ ಮರಳಿ ಹುಟ್ಟಿ ಬರಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *