Posts Slider

Karnataka Voice

Latest Kannada News

ಪತ್ರಕರ್ತರಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಿಸಲು- ಗ್ರಾಮೀಣ ಶಿಕ್ಷಕರ ಸಂಘದ ಆಗ್ರಹ

Spread the love

ಹುಬ್ಬಳ್ಳಿ: ರಾಜ್ಯದ ಎಲ್ಲಾ ಪತ್ರಕರ್ತರಿಗೂ ಕೋವ್ಯಾಕ್ಸಿನ್ ಲಸಿಕೆ ಹಾಕಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣ ಶಿಕ್ಷಕರ ಸಂಘ ಆಗ್ರಹಿಸಿದೆ.

ಕೊರೋನಾ ಮಹಾಮಾರಿ ತಡೆಗಟ್ಟುವಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ನಾಲ್ಕನೇ ಅಂಗವೆನಿಸಿಕೊಂಡಿರುವ ಪತ್ರಿಕಾ ರಂಗದಲ್ಲಿ ಕೊರೋನಾ ವಾರಿಯರ್ಸ ಆಗಿ ಸಮರೋಪಾದಿಯಲ್ಲಿ ಹಗಲಿರುಳೂ ಶ್ರಮಿಸುತ್ತಿರುವ ಮಾಧ್ಯಮ ಬಳಗಕ್ಕೆ ವಯೋಮಿತಿಯಿಲ್ಲದೆ ತಾಲೂಕಿಗೊಂದು ಅವರಿಗೆ ಅನುಕೂಲಕರವಾದ ಸ್ಥಳದಲ್ಲಿ ಲಸಿಕೆ ನೀಡುವ ಬೂತ್ ತೆರೆದು ಮಾಹಿತಿ ನೀಡಿ ಲಸಿಕೆಯನ್ನು ಆಧ್ಯತೆ ಮೇರೆಗೆ ಹಾಕುವಂತೆ ರಾಜ್ಯದ ಆಯಾ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾ ಅರೋಗ್ಯಾಧಿಕಾರಿಗಳು ಹಾಗೂ ತಾಲೂಕಾ ಆಡಳಿತಾಧಿಕಾರಿಗಳು ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳು ಏರ್ಪಾಡು ಮಾಡಬೇಕು.

ಏಕೆಂದರೆ ನಾವೆಲ್ಲರೂ ಕೇಳಿದ್ದನ್ನು ಘನ ಸರ್ಕಾರಕ್ಕೆ ತಲುಪಿಸುತ್ತಾರೆ. ಆದರೆ, ಅವರಿಗಾಗಿ ಏನನ್ನೂ ಕೇಳುವುದಿಲ್ಲ. ನಿಸ್ವಾರ್ಥ ಕಾಯಕ ಯೋಗಿಗಳಿಗೆ ಅನುಕೂಲಿಸಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ, ಪ್ರ.ಕಾ.ಮಲ್ಲಿಕಾರ್ಜುನ ಉಪ್ಪಿನ, ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ, ಕಾರ್ಯಾಧ್ಯಕ್ಷ ಶರಣಪ್ಪಗೌಡ್ರ.ಆರ್.ಕೆ, ಕೋಶಾಧ್ಯಕ್ಷ ಎಸ್.ಎಫ್.ಪಾಟೀಲ ಮುಂತಾದವರು ಆಗ್ರಹಿಸಿದ್ದಾರೆ.


Spread the love

Leave a Reply

Your email address will not be published. Required fields are marked *