ಹೃದಯಾಘಾತ ಶಿಕ್ಷಕ ಸಾವು: ಬೆಳಿಗ್ಗೆ ಕಾಣಿಸಿಕೊಂಡಿದ್ದ ಎದೆನೋವು
1 min readಹುಬ್ಬಳ್ಳಿ: ಇತ್ತೀಚೆಗಷ್ಟೇ ಪದೋನ್ನತಿ ಹೊಂದಿ ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪದ ಪ್ರೌಢಶಾಲೆಯಲ್ಲಿ ಇಂಗ್ಲೀಷ್ ಭೋದಿಸುತ್ತಿದ್ದ ಶಿಕ್ಷಕ ಈರಣ್ಣಾ ಕಾಂಬ್ಳೆ ತೀವ್ರ ಎದೆನೋವಿನಿಂದ ಸಾವಿಗೀಡಾಗಿದ್ದಾರೆ.
ಮೂಲತಃ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಈರಣ್ಣಾ ಕಾಂಬ್ಳೆ, ಹಲವು ವರ್ಷಗಳವರೆಗೆ ಬೈರಿದೇವರಕೊಪ್ಪ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಬಿಎಡ್ ಮುಗಿಸಿದ್ದ ಈರಣ್ಣಾ ಕಾಂಬ್ಳೆಯವರಿಗೆ ಇತ್ತೀಚೆಗೆ ಪದೋನ್ನತಿ ಆಧಾರದ ಮೇಲೆ ಪ್ರೌಢಶಾಲೆಗೆ ವರ್ಗಾವಣೆ ಮಾಡಲಾಗಿತ್ತು.
ಇಂದು ಬೆಳಗಿನ ಜಾವ ರೇಣುಕಾನಗರದಲ್ಲಿನ ತಮ್ಮ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ. ನಂತರ ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಿಲ್ಲ.