Posts Slider

Karnataka Voice

Latest Kannada News

ಟ್ಯಾಕ್ಸ್ ಕನ್ಸಲ್ಟಂಟ್ “ಸಿದ್ಧಾಟಗಿಮಠ” ಸತ್ಕರಿಸುವ ಮೂಲಕ ಇಂಜಿನಿಯರ್ ದಿನ ಆಚರಿಸಿದ “ಅಭಿಯಂತರ ಗಣೇಶ ಭಟ್”

1 min read
Spread the love

ಕಟ್ಟಡದ ಉತ್ತಮ ನಿರ್ವಹಣೆ ಮತ್ತು ಬಾಳಿಕೆ

ಧಾರವಾಡ: ರಾಷ್ಟ್ರೀಯ ಅಭಿಯಂತರರ ದಿನಾಚರಣೆಯ ಅಂಗವಾಗಿ ದಿ,15 ಸೆಪ್ಟೆಂಬರ 2023 ರಂದು ಅತ್ಯುತ್ತಮ ಕಟ್ಟಡ ನಿರ್ವಹಣೆಗಾಗಿ ತಮ್ಮ ಗ್ರಾಹಕರು ಹಾಗೂ ಟ್ಯಾಕ್ಸ್ ಕನ್ಸಲ್ಟಂಟ್ ಕಲ್ಮೇಶ. ಎಸ್. ಸಿದ್ದಾಟಗಿಮಠ ಅವರನ್ನು ಅಭಿಯಂತರರಾದ ಗಣೇಶ ಭಟ್‌ ಅವರು ಸನ್ಮಾನಿಸಿದರು.

ಈ ವರ್ಷದ ಘೋಷವಾಕ್ಯ ನಿರ್ವಹಣೆ ಮತ್ತು ಬಾಳಿಕೆ ಇದರ ದ್ಯೋತಕವಾಗಿ ತಮ್ಮ ಕಟ್ಟಡವನ್ನು ಅತಿ ಸಮರ್ಪಕವಾಗಿ ಬಾಳಿಕೆ ಬರುವಂತೆ ಎಲ್ಲಾ ರೀತಿಯಿಂದಲೂ ನಿರ್ವಹಣೆ ಮಾಡಿದಕ್ಕಾಗಿ  ಸನ್ಮಾನಿಸಲಾಯಿತು.

ದವಾಖಾನೆ, ಶಾಲೆ, ಹೊಟೇಲ್ ಕಟ್ಟಡ ಇರಲಿ ನಂತರ ಆ ಕಟ್ಟಡವನ್ನು ಕಾಲಕಾಲಕ್ಕೆ ಅವಶ್ಯಕತೆಗೆ ಅನುಗುಣವಾಗಿ ನಿರ್ವಹಣೆ ಮಾಡಿದರೆ, ಆ ಕಟ್ಟಡವು ಹೆಚ್ಚು ವರ್ಷ ಸರಿಯಾಗಿ ಬಾಳಿಕೆ ಬರುವಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಯಂತರ ಗಣೇಶ ಭಟ್‌ ಹೇಳಿದರು.

ಕೇವಲ ಹೆಚ್ಚು ಹಣವನ್ನು ಖರ್ಚು ಮಾಡಿ ಕಟ್ಟಡ ಕಟ್ಟುವದಲ್ಲದೆ ಅದರ ಸರಿಯಾದ ನಿರ್ವಹಣೆ ಆ ಕಟ್ಟಡದ ಆರೋಗ್ಯವನ್ನು ಕಾಪಾಡುವಲ್ಲಿ  ಪ್ರಮುಖ ಪಾತ್ರ ವಹಿಸುತ್ತಿದೆ. ಅಭಿಯಂತರರ ದಿನಾಚರಣೆಯ ಅಂಗವಾಗಿ ಈ ವರ್ಷದ ರಾಷ್ಟ್ರೀಯ ಘೋಷವಾಕ್ಯ ನಿರ್ವಹಣೆ ಮತ್ತು ಬಾಳಿಕೆ ಇದಕ್ಕೆ ಪೂರಕವಾಗಿ ಆಭಿಯಂತರ ಗಣೇಶ ಭಟ್‌ರವರು ಎಲ್ಲಾ ಕಟ್ಟಡದ ಮಾಲೀಕರಿಗೆ ಈ ಮೂಲಕವಾಗಿ ವಿಶೇಷ ವಿನಂತಿಯನ್ನು ಮಾಡಿದರು. ಈ ಸಂದರ್ಭದಲ್ಲಿ ಅಭಿಯಂತರರಾದ ಭಾರತಿ ಜೆಕೆ ಹಾಗೂ ಮಂಜುನಾಥ ಬನ್ನೂರ ಹಾಜರಿದ್ದರು.


Spread the love

Leave a Reply

Your email address will not be published. Required fields are marked *