Posts Slider

Karnataka Voice

Latest Kannada News

ತಾರಿಹಾಳ ಬೆಂಕಿ ಅವಘಡ: ಸತ್ತವರ ಸಂಖ್ಯೆ ಮೂರಕ್ಕೇರಿಕೆ…

1 min read
Spread the love

ಇಂದು ಬೆಳಗಿನ ಜಾವ ಸಾವಿಗೀಡಾದವರನ್ನ ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದ ಮಾಳೇಶ ಹದ್ದಣ್ಣನವರ ಹಾಗೂ ತಾರಿಹಾಳದ ಗೌರಮ್ಮ ಹಿರೇಮಠ ಎಂದು ಗುರುತಿಸಲಾಗಿದೆ

ಹುಬ್ಬಳ್ಳಿ: ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಸ್ಪಾರ್ಕಲ್ ಪ್ಯಾಕ್ಟರಿಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡ ಮತ್ತಿಬ್ಬರು ಬೆಳಗಿನ ಜಾವ ಸಾವಿಗೀಡಾಗಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ ಮೂರಕ್ಕೇರಿದೆ.

ಗದಗ ಮೂಲದ ವಿಜಯಲಕ್ಷ್ಮಿ ನಿನ್ನೆ ಸಾವಿಗೀಡಾಗಿದ್ದರು. ಇಂದು ಬೆಳಗಿನ ಜಾವ ಮತ್ತೋರ್ವ ಮಹಿಳೆ ಹಾಗೂ ಪುರುಷನೋರ್ವ ಸಾವಿಗೀಡಾಗಿದ್ದು, ಅವರ ಮಾಹಿತಿ ಸಿಗಬೇಕಿದೆ.

ಒಟ್ಟು ಎಂಟು ಕಾರ್ಮಿಕರು ಘಟನೆಯಲ್ಲಿ ಗಾಯಗೊಂಡಿದ್ದರು. ಇದರಲ್ಲಿ ಮೂವರ ಸ್ಥಿತಿ ಗಂಭೀರವಾಗಿತ್ತು. ಆ ಮೂವರು ಸಾವಿಗೀಡಾಗಿದ್ದಾರೆ. ಇನ್ನುಳಿದ ಐವರಿಗೆ ಕಿಮ್ಸನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.


Spread the love

Leave a Reply

Your email address will not be published. Required fields are marked *