ತಮಿಳುನಾಡಿನಲ್ಲಿ ಮತ್ತೆ ಲಾಕ್ಡೌನ್: ಹೊರಗೆ ಬಂದರೇ ಬೀಳತ್ತೆ ಕ್ರಿಮಿನಲ್ ಕೇಸ್
1 min readಚೆನೈ: ರಾಜ್ಯದಲ್ಲಿ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ತಮಿಳುನಾಡು ಸರಕಾರ ಕಠಿಣ ನಿಷೇಧಾಜ್ಞೆ ಜಾರಿಗೆ ತಂದಿದೆ.
ಇಂದಿನಿಂದ ಹೊಸ ಆದೇಶವನ್ನ ಸರಕಾರ ಹೊರಡಿಸಿದ್ದು, ಸಾರ್ವಜನಿಕರು ಸುಖಾಸುಮ್ಮನೆ ಹೊರಗೆ ಬಂದರೇ ಕ್ರಿಮಿನಲ್ ಮೊಕದ್ದಮೆ ಹಾಕುವುದಾಗಿ ಎಚ್ವರಿಕೆ ನೀಡಿದೆ.
ಔಷಧ ಅಂಗಡಿಗಳು ಹೊರತುಪಡಿಸಿ ಇನ್ಯಾವುದೇ ವ್ಯಾಪಾರ ವಹಿವಾಟು ಮಾಡದಂತೆ ನಿರ್ಬಂಧ ಹೇರಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಬೈಕ್ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜ್ಯದಲ್ಲಿ ಇಂದು ಎರಡು ಸಾವಿರ ವ್ಯಕ್ತಿಗಳ ತಪಾಸಣೆ ವರದಿ ಬರಬೇಕಿದೆ.