Posts Slider

Karnataka Voice

Latest Kannada News

ಹುಬ್ಬಳ್ಳಿ: ಬಬ್ಲೂ ಮೇಲೆ ಹಾಡುಹಗಲೇ ಅಟ್ಯಾಕ್- ತಲ್ವಾರ್ ಸಮೇತ ಹೆಜ್ಜೆಯಿಟ್ಟ “ಪ್ರಭು”…

1 min read
Spread the love

ಹುಬ್ಬಳ್ಳಿ: ಧಾರವಾಡದಲ್ಲಿ ಗುತ್ತಿಗೆದಾರನ ಮೇಲೆ ನಡೆದ ಹಲ್ಲೆ ಮಾಸುವ ಮುನ್ನವೇ ಚೋಟಾ ಬಾಂಬೆಯಲ್ಲಿ ಮತ್ತೆ ತಲ್ವಾರ ಸದ್ದು ಮಾಡಿದ್ದು, ಎಂಓಬಿ (ಮೋಡಸ್ ಅಪರೆಂಡಿ ಬ್ಯುರೋ) ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ.

ಪೊಲೀಸ ಠಾಣೆ

ಕೇಶ್ವಾಪುರ ಪೊಲೀಸ್ ಠಾಣೆ ಹುಬ್ಬಳ್ಳಿ

ಅಪರಾಧ ಸಂಖ್ಯೆ ಮತ್ತು ಕಲಂ

ಅಪರಾಧ ಸಂಖ್ಯೆ: 122/2021 ಕಲಂ 341, 326, 307 ಸಹಕಲಂ 34 ಐಪಿಸಿ

ಫಿರ್ಯಾದಿ ಹೆಸರು

ರೋಹನ ತಂದೆ ಸುಧಾಕರ ಬಂಡಿ ವಯಾ: ೨೬ ವರ್ಷ ಜಾತಿ: ಕ್ರಿಶ್ಚಿಯನ್ ಉದ್ಯೋಗ: ವಿದ್ಯಾರ್ಥಿ ಸಾ: ವಿನೊಬಾನಗರ ಮನೆ ನಂ:790/ಎ ಗದಗ ರೋಡ ಹುಬ್ಬಳ್ಳಿ,

ಆರೋಪಿತರ ಹೆಸರು

1] ಪ್ರಭುರಾಜ ತಂದೆ ಅಬ್ರಾಹಂ ಕಲ್ಲೂಸಾ: ಸಿಮೆಂಟ್ ಚಾಳ ಹುಬ್ಬಳ್ಳಿ

2] ಪ್ರಶಾಂತ ತಂದೆ ಪ್ರಸಾದ ಬೊಮ್ಮಾಜಿ, ಸಾ: ಜನತಾ ಕ್ವಾಟರ್ಸ ಹುಬ್ಬಳ್ಳಿ

ಗಾಯಾಳು

ರಾಹುಲ್ @ ಬಬ್ಲೂ ತಂದೆ ಸುಧಾಕರ ಬಂಡಿ ಸಾ: ವಿನೊಬಾನಗರ ಮನೆ ನಂ:790/ಎ ಗದಗ ರೋಡ ಹುಬ್ಬಳ್ಳಿ,

ಘಟನೆ ಸಂಭವಿಸಿದ ದಿನಾಂಕ: ವೇಳೆ ವ ಸ್ಥಳ

ದಿನಾಂಕ 27/11/2021 ರಂದು 14-30 ಗಂಟೆಗೆ, ಹುಬ್ಬಳ್ಳಿ ಕುಸುಗಲ್ಲ ರೋಡ ಸೆಲ್ ಪಟ್ರೋಲ್ ಬಂಕ್ ಹತ್ತಿರ

ವರದಿಯಾದ ದಿನಾಂಕ ವ ವೇಳೆ

ದಿನಾಂಕ: 27/11/2021 ರಂದು 18-45 ಗಂಟೆಗೆ

ತನಿಖಾಧಿಕಾರಿಗಳು

ಶ್ರೀ ಬಾಬಾ ಎಮ್. ಪಿ.ಎಸ್.ಐ(ಕಾವಸು)

ಕೇಶ್ವಾಪುರ ಪೊಲೀಸ್ ಠಾಣೆ ಹುಬ್ಬಳ್ಳಿ

ಸಾರಾಂಶ:- ಇದರಲ್ಲಿ ನಮೂದು ಮಾಡಿದ ಗಾಯಾಳು ರಾಹುಲ್ @ ಬಬ್ಲೂ ಬಂಡಿ ಇವರು ಆರೋಪಿ ಪ್ರಭುರಾಜ ತಂದೆ ಅಬ್ರಾಹಂ ಕಲ್ಲೂ ಈತನು ಕಳುವು ಮಾಡಿದ ಬಗ್ಗೆ ಪೊಲೀಸ್ರಿಗೆ ಹೇಳಿದ್ದಾನೆ ಎಂದು ಸಂಶಯ ಮಾಡಿ ಆರೋಪಿತರಾದ ಪ್ರಭುರಾಜ ಕಲ್ಲೂ ಮತ್ತು ಪ್ರಶಾಂತ ತಂದೆ ಪ್ರಸಾದ ಬೊಮ್ಮಾಜಿ ಇಬ್ಬರೂ ಕೂಡಿಕೊಂಡು ದಿನಾಂಕ 27/11/2021 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಗಾಯಾಳುವಿಗೆ ಕುಸುಗಲ್ರೋಡ್ ಶೆಲ್ ಪೆಟ್ರೋಲ್ ಬಂಕ ಹತ್ತಿರ ಇರುವ ಎಳೆನೀರು ಅಂಗಡಿಯ ಹತ್ತಿರ ಕರೆದುಕೊಂಡು ಹೋಗಿ ಎಳೆನೀರು ಮಾರುವವನು ಇಟ್ಟಿದ್ದ ಮಚ್ಚನ್ನು ತೆಗೆದುಕೊಂಡು ಆರೋಪಿ ಪ್ರಶಾಂತ ಈತನು ಅವನಿಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು ಪ್ರಭುರಾಜ ಈತನು ಮಚ್ಚದಿಂದ ಅವನಿಗೆ ಹೊಡೆದು ಆತನ ತಲೆಗೆ, ಎದೆಗೆ, ಕೈಗಳಿಗೆ ಬುಜಕ್ಕೆ ಹೊಡೆದು ಭಾರಿಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ ಅಪರಾಧ.


Spread the love

Leave a Reply

Your email address will not be published. Required fields are marked *