Posts Slider

Karnataka Voice

Latest Kannada News

ತಡಸಿನಕೊಪ್ಪದಲ್ಲಿ ಬಡಿದಾಟ-ನಾಲ್ವರಿಗೆ ಗಾಯ: ಆಸ್ಪತ್ರೆಗೆ ದಾಖಲು

Spread the love

ಧಾರವಾಡ: ಜಮೀನು ವ್ಯಾಜ್ಯದಿಂದ ಎರಡು ಕುಟುಂಬಗಳ ನಡುವೆ ಬಡಿದಾಟ ನಡೆದಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡು ಧಾರವಾಡ ಸಿವಿಲ್ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ದ್ಯಾಮಪ್ಪ ನಿಂಗಪ್ಪ ಗೌಡರ ಹಾಗೂ ಈತನ ಸಹೋದರ ಕೂಡಿಕೊಂಡು ಫಕ್ಕೀರಪ್ಪ ದ್ಯಾಮಪ್ಪ ವಾಲೀಕಾರ, ಕಲ್ಲಪ್ಪ ಫಕ್ಕೀರಪ್ಪ ವಾಲೀಕಾರ ಎಂಬುವವರ ಜೊತೆ ಕಾದಾಟಕ್ಕೀಳಿದಿದ್ದಾರೆ. ಇದರಿಂದ ನಾಲ್ವರಿಗೂ ಗಾಯಗಳಾಗಿದ್ದು, ಓರ್ವನ ತಲೆ ಒಡೆದಿದೆ.

ಗಾಯಾಳುಗಳು ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ವಿದ್ಯಾಗಿರಿ ಠಾಣೆಯ ಪೊಲೀಸರು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಪಡೆದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಲಿದ್ದಾರೆ.


Spread the love

Leave a Reply

Your email address will not be published. Required fields are marked *