Posts Slider

Karnataka Voice

Latest Kannada News

ಮದುವೆಯಾಗಬೇಕಿದ್ದ ಯುವಕ ದುರ್ಮರಣ: ವಿದ್ಯಾನಗರ ಈಜುಗೊಳದಲ್ಲಿ ಘಟನೆ

1 min read
Spread the love

ಹುಬ್ಬಳ್ಳಿ: ಕಳೆದ ತಿಂಗಳಷ್ಟೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಗೆಳೆಯರೊಂದಿಗೆ ವಿದ್ಯಾನಗರದ ಖಾಸಗಿ ಈಜುಗೊಳಕ್ಕೆ ಈಜಲು ಹೋದಾಗ ಸಾವನ್ನಪ್ಪಿದ ಘಟನೆ ನಡೆದಿದೆ.

ನವಲಗುಂದ ಪಟ್ಟಣದ ಶಿರಾಜ್ ಅಣ್ಣಿಗೇರಿ ಎಂಬ ಯುವಕನೇ ಮೃತಪಟ್ಟಿದ್ದು, ಈತನ ಜೊತೆಗೆ ಹೋಗಿದ್ದ ಯುವಕರು ಭಯದಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಶಿರಾಜ್ ಅಣ್ಣಿಗೇರಿಯ ವಿವಾಹ ಮುಂದಿನ ತಿಂಗಳು ನಡೆಯಬೇಕಿತ್ತು. ಅಷ್ಟರಲ್ಲೇ ಇಂತಹ ದುರ್ಘಟನೆಯಲ್ಲಿ ಆತ ಪ್ರಾಣ ಕಳೆದುಕೊಂಡಿದ್ದು, ಕುಟುಂಬದವರ ನೋವು ಮುಗಿಲು ಮುಟ್ಟಿದೆ.


Spread the love

Leave a Reply

Your email address will not be published. Required fields are marked *