Posts Slider

Karnataka Voice

Latest Kannada News

ಹುಬ್ಬಳ್ಳಿ: ​”ಸಾಗರೋಲ್ಲಂಘನವೋ? ಶೀಲ ಉಲ್ಲಂಘನವೋ? ವಿಡಿಯೋ ಗದ್ದಲದಲ್ಲಿ ಸಿಕ್ಕಿಬಿದ್ದ ಮಠಾಧೀಶನಿಗೆ ಭಕ್ತರಿಂದಲೇ ‘ಧರ್ಮದೇಟಿನ’ ಪ್ರಸಾದ!”

Spread the love

ಬೆಂಗಳೂರು: ರಾಜ್ಯಾದ್ಯಂತ ಚಳವಳಿ ನಡೆಸಿ ಸರ್ಕಾರಕ್ಕೇ ಬೆವರಿಳಿಸಿದ್ದ ಆ “ಸುರದ್ರೂಪಿ” ಮಠಾಧೀಶರು ಈಗ ತಾವೇ ಬೆವರುತ್ತಾ ಗೆಸ್ಟ್‌ಹೌಸ್‌ನಲ್ಲಿ ಅಡಗಿ ಕುಳಿತಿದ್ದಾರೆ! ಕಾರಣವಿಷ್ಟೇ, ಪರಸ್ತ್ರೀಯರ ಜೊತೆಗಿನ ಇವರ ‘ಪ್ರಣಯ ಪ್ರಸಂಗ’ ಈಗ ಮೂರು ವಿಡಿಯೋಗಳ ಮೂಲಕ ಬೀದಿಗೆ ಬಂದಿದೆ.

​ಸಾಗರೋಲ್ಲಂಘನ ಮಾಡಿ ಸುದ್ದಿಯಾಗಿದ್ದ ಈ ಸ್ವಾಮೀಜಿ, ಗುಮ್ಮಟ ನಗರಿಯ ಯುವತಿಯ ಜೊತೆ ಮಸಾಲೆ ಸವಿಯಲು ಹೋಗಿ ಈಗ ಭಕ್ತರಿಂದಲೇ ‘ಧರ್ಮದೇಟು’ ತಿಂದಿದ್ದಾರೆ. ಸಂಧಾನಕ್ಕೆ ಕರೆಸಿ ಉಡಾಫೆ ಪ್ರದರ್ಶಿಸಿದ ಶ್ರೀಗಳಿಗೆ ಜನರೇ ಸರಿಯಾದ ‘ಪಂಚ್’ ನೀಡಿದ್ದು, ಮುಖ ತೋರಿಸಲಾಗದೆ ಸ್ವಾಮೀಜಿ ಈಗ ಸ್ವಯಂ ಚಿಕಿತ್ಸೆ ಪಡೆಯುತ್ತಿದ್ದಾರೆ.

​ಒಟ್ಟಿನಲ್ಲಿ, ಮಸಾಲೆಯ ರುಚಿಗೆ ಮರುಳಾದ ಶ್ರೀಗಳಿಗೆ ಈಗ ವರದಿಗಾರ ಶಿವಕುಮಾರ್ ಮೆಣಸಿನಕಾಯಿಯವರ ವರದಿಯ ಖಾರವೇ ಅತಿ ಹೆಚ್ಚು ಉರಿ ತರಿಸುತ್ತಿದೆ!


Spread the love

Leave a Reply

Your email address will not be published. Required fields are marked *

You may have missed