Posts Slider

Karnataka Voice

Latest Kannada News

ಸುಳ್ಳದ ಬಳಿ ಕಾರು ಅಪಘಾತ: ಬ್ಯಾಹಟ್ಟಿ ಯುವಕನ ದುರಂತ ಅಂತ್ಯ…

1 min read
Spread the love

ಹುಬ್ಬಳ್ಳಿ: ನಗರದತ್ತ ಹೊರಟಿದ್ದ ಕಾರೊಂದು ನಿಯಂತ್ರಣ ತಪ್ಪಿ ಕಮರಿಗೆ ಬಿದ್ದು ಯುವಕನೋರ್ವ ಸಾವಿಗೀಡಾಗಿದ್ದು, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಬ್ಯಾಹಟ್ಟಿ ಗ್ರಾಮದ ಸಂತೋಷ ಬೇಗೂರ ಎಂಬ 20 ವಯಸ್ಸಿನ ಯುವಕನೇ ಘಟನೆಯಲ್ಲಿ ಸಾವಿಗೀಡಾಗಿದ್ದು, ಇನ್ನುಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಮರಿಗೆ ಬಿದ್ದ ಸಮಯದಲ್ಲಿ ಕಾರಿನ ಮುಂದಿನ ಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಯುವಕನ ದೇಹವೂ ಕಾರಿನಲ್ಲಿಯೇ ಸಿಲುಕಿದ್ದು, ಅದನ್ನ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಗಿದೆ.

ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ದೇಹವನ್ನ ಹೊರ ತೆಗೆಯಲು ಪ್ರಯತ್ನಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *