Posts Slider

Karnataka Voice

Latest Kannada News

ಮಗಳ ಮದುವೆ ನಾಲ್ಕು ದಿನವಿದ್ದಾಗಲೇ ಸೋಮಾಪುರದಲ್ಲಿ ನೇಣಿಗೆ ಶರಣಾದ ತಂದೆ…!

Spread the love

ಧಾರವಾಡ: ತಾಲೂಕಿನ ಸೋಮಾಪುರ ಗ್ರಾಮದಲ್ಲಿ ವ್ಯಕ್ತಿಯೋರ್ವ ಮಾನಸಿಕವಾಗಿ ನೊಂದುಕೊಂಡು ಗ್ರಾಮದ ಪಕ್ಕದ ಹೊಲವೊಂದರ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.

ಇನ್ನೂ ನಾಲ್ಕು ದಿನದ ನಂತರ ಮಗಳ ಮದುವೆಯನ್ನ ಮಾಡಬೇಕಾಗಿದ್ದ  50 ವಯಸ್ಸಿನ ಕರೆಪ್ಪ ಕರೆಪ್ಪ ಚಪ್ಪರಮನಿ ಎಂಬುವವರೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಒಂದು ವಾರದಿಂದ ಮದುವೆಗೆ ಬೇಕಾಗಿದ್ದ ಸಿದ್ಧತೆಗಳನ್ನ ಮಾಡಿಕೊಂಡಿದ್ದ ಕರೆಪ್ಪ, ಲಾಕ್ ಡೌನ್ ಆದ ನಂತರ ಸಾಕಷ್ಟು ಮಾನಸಿಕವಾಗಿ ನೊಂದುಕೊಂಡಿದ್ದನೆಂದು ಹೇಳಲಾಗಿದೆ.

ಸೋಮಾಪುರ ಗ್ರಾಮಕ್ಕೆ ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ  ಹಾಗೇ ಆಗಮಿಸಿದ ಧಾರವಾಡ ಗ್ರಾಮಿಣ ಠಾಣೆಯ ಪೊಲೀಸರು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *