Posts Slider

Karnataka Voice

Latest Kannada News

ಸಾಯಿನಗರದ ಬಳಿಯ ರೇಲ್ವೆ ಹಳಿಯಲ್ಲಿ ಶವವಾದ ವ್ಯಕ್ತಿ…!

Spread the love

ಹುಬ್ಬಳ್ಳಿ: ಉಣಕಲ್ ಸಾಯಿನಗರದ ಬಳಿಯ ರೇಲ್ವೆಯ ಹಳಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವವೊಂದು ಸಿಕ್ಕಿದ್ದು, ಯಾವ ಕಾರಣಕ್ಕೆ ರೇಲ್ವೆ ಹಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬುದು ತಿಳಿದು ಬಂದಿಲ್ಲ.

crime scene in railway track-Sainagar
Sainagar – Railway track

ಸುಮಾರು 55 ರಿಂದ 60 ವರ್ಷದ ಪುರುಷನ ಶವ ದೊರಕಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ರೇಲ್ವೆ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕರೇ, ಹುಬ್ಬಳ್ಳಿ ರೇಲ್ವೆ ಠಾಣೆಯ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *