Posts Slider

Karnataka Voice

Latest Kannada News

ಪುಷ್ಪಾ ಪಟದಾರಿ ಸೂಸೈಡ್ ಪ್ರಕರಣ: “Big ಟ್ವಿಸ್ಟ್”- Exclusive

Spread the love

ಹುಬ್ಬಳ್ಳಿ: ನವನಗರದ ಮನೆಯಲ್ಲಿ ಹತ್ಯೆಗೊಳಗಾದ ಗ್ರಾಮ ಪಂಚಾಯತಿ ಸದಸ್ಯನ ಪತ್ನಿಯ ಆತ್ಮಹತ್ಯೆ ಪ್ರಕರಣ ಬೇರೆಯದ್ದೆ ಸ್ವರೂಪ ಪಡೆದಿದ್ದು, ಆಕೆಯ ಆತ್ಮಹತ್ಯೆಗೆ ನಾಲ್ವರು ಕಾರಣರೆಂಬ ಪ್ರಕರಣ ದಾಖಲಾಗಿದೆ.

ರಾಯನಾಳದ ದೀಪಕ ಪಟದಾರಿ ಹತ್ಯೆ ಪ್ರಕರಣ‌ ಸಿಓಡಿಗೆ ಹಸ್ತಾಂತರವಾದ ಮೇಲೆ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಸಾವಿಗೆ ಕುಟುಂಬದ ನಾಲ್ವರು ಕಾರಣವೆಂದು ಪುಷ್ಪಾಳ ತಂದೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪುಷ್ಪಾ ಆತ್ಮಹತ್ಯೆ ಮಾಡಿಕೊಳ್ಳಲು ದೀಪಕನ ಸಹೋದರ ಸಂಜಯ ಸೇರಿದಂತೆ ನಾಲ್ವರೇ ಕಾರಣವೆಂದು ದೂರು ನೀಡಿದ್ದರಿಂದ ‘306’ ಸೆಕ್ಷನ್ ದಲ್ಲಿ FIR ದಾಖಲು ಮಾಡಲಾಗಿದೆ.

ದೀಪಕ ಪಟದಾರಿಯನ್ನ ಪ್ರೀತಿಸಿ ಮದುವೆಯಾಗಿದ್ದ ಪುಷ್ಪಾ ಕೂಡಾ ಸಾವಿಗೆ ಶರಣಾಗಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಪುಷ್ಪಾಳ ಕುಟುಂಬದವರು ಹತ್ಯೆಯ ಹಿಂದೆ ಇದ್ದರೆಂದು ಆರೋಪ ಕೇಳಿ ಬಂದಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.


Spread the love

Leave a Reply

Your email address will not be published. Required fields are marked *