ಬಿಜವಾಡರ ಕ್ವಾರಿಯಲ್ಲಿ ಬಿದ್ದು ಮಹಿಳೆ ಆತ್ಮಹತ್ಯೆ…!

ಹುಬ್ಬಳ್ಳಿ: ತಾಲೂಕಿನ ಅದರಗುಂಚಿ ಗ್ರಾಮದ ಹೊರವಲಯದಲ್ಲಿರುವ ಕಲ್ಲಿನ ಕ್ವಾರಿಯಲ್ಲಿ ಮಹಿಳೆಯೋರ್ವಳು ಬಿದ್ದು ಆತ್ಮಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಕಿಗೆ ಬಂದಿದೆ.

ಅದರರಗುಂಚಿ ಗ್ರಾಮದ ಬಸಮ್ಮ ಸಹದೇವ ಬಳ್ಳೂರ ಎಂಬ 50 ವಯಸ್ಸಿನ ಮಹಿಳೆಯೇ ಕ್ವಾರಿಯಲ್ಲಿ ನಿರ್ಮಾಣವಾಗಿರುವ ಹೊಂಡದಲ್ಲಿ ಬಿದ್ದು ಸಾವಿಗೆ ಶರಣಾಗಿದ್ದಾಳೆ.
ತನಗೆ ಯಾವುದೋ ರೋಗ ಬಂದಿದೆ ಎಂದು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಹೇಳಲಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.