ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ವಿರಹ: ನೇಣಲ್ಲಿ ಪತಿ, ಮನೆ ಹೊರಗೆ ಕಣ್ಣೀರು..

ಹುಬ್ಬಳ್ಳಿ: ತನ್ನ ಪತ್ನಿಯೊಂದಿಗೆ ರಾತ್ರಿಯಲ್ಲಾ ಜಗಳವಾಡಿ ಅವರೆಲ್ಲರನ್ನೂ ಹೊರಗೆ ಹಾಕಿದ ಪತಿಯೋರ್ವ ಬೆಳಗಾಗುವುದರೊಳಗೆ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಹುಬ್ಬಳ್ಳಿಯ ನೇಕಾರನಗರದ ಬೇಪಾರಿ ಪ್ಲಾಟನಲ್ಲಿ ಬೆಳಕಿಗೆ ಬಂದಿದೆ.

28 ವರ್ಷದ ಅಮೀರ ಮೊಹ್ಮದಲಿ ಮನಿಯಾರ ಎಂಬಾತನೇ ತಡರಾತ್ರಿ ಹೆಂಡತಿಯೊಂದಿಗೆ ಜಗಳವಾಡಿ, ಇಬ್ಬರು ಮಕ್ಕಳು ಸಮೇತ ಎಲ್ಲರನ್ನೂ ಹೊರಗೆ ಹಾಕಿದ್ದಾನೆ. ಬೆಳಿಗ್ಗೆ ಬಂದು ನೋಡಿದಾಗ, ಅಮೀರ, ನೇಣಿಗೆ ಶರಣಾಗಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ.

ಘಟನೆ ಬೆಳಕಿಗೆ ಬರುತ್ತಿದ್ದ ಹಾಗೇ ಮನೆಯ ಮುಂದೆ ಸಂಬಂಧಿಕರು ರೋಧಿಸುತ್ತಿದ್ದು, ಪ್ರಕರಣದ ಬಗ್ಗೆ ಹಲವು ರೀತಿಯಲ್ಲಿಸಂಶಯವನ್ನ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಬಂದಿದ್ದು, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಕಿಮ್ಸಗೆ ರವಾನೆ ಮಾಡಿದ್ದಾರೆ.
ಇದು ಆತ್ಮಹತ್ಯೆ ಪ್ರಕರಣವೆಂದು ಮೇಲ್ನನೋಟಕ್ಕೆ ಕಂಡು ಬರುತ್ತಿದ್ದು, ವೈದ್ಯಕೀಯ ವರದಿಯ ನಂತರ ನಿಖರವಾದ ಮಾಹಿತಿ ಲಭಿಸಲಿದೆ.