ಹುಬ್ಬಳ್ಳಿ ಉದ್ಯಮನಗರದಲ್ಲಿ ಸ್ಟೇರ್ ಕೇಸ್ ಗೆ ನೇತಾಡುತ್ತಿದೆ ಶವ…!

ಹುಬ್ಬಳ್ಳಿ: ಯಾರೂ ಇಲ್ಲದ ಸಮಯ ನೋಡಿಕೊಂಡು ವ್ಯಕ್ತಿಯೋರ್ವ ಸ್ಟೇರ್ ಕೇಸ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಉದ್ಯಮನಗರದ ಗೇಟ್ ನಂಬರ 1ರ ಬಳಿ ಸಂಭವಿಸಿದೆ.

ಹುಬ್ಬಳ್ಳಿಯ ಮಾರುತಿನಗರದ ನಿವಾಸಿಯಾಗಿರುವ ಹಳ್ಳಪ್ಪ ದೇವಪ್ಪ ಪೂಜಾರ ಎಂಬ ವ್ಯಕ್ತಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉದ್ಯಮನಗರದಲ್ಲಿ ಹಳ್ಳಪ್ಪ ಕೆಲಸ ಮಾಡುತ್ತಿದ್ದನೆಂದು ಹೇಳಲಾಗಿದೆ.
ಯಾವ ಕಾರಣಕ್ಕೆ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಗೊತ್ತಾಗಿಲ್ಲ. ಘಟನಾ ಸ್ಥಳಕ್ಕೆ ತೆರಳಿರುವ ಗೋಕುಲ ಠಾಣೆಯ ಪೊಲೀಸರು, ನೇತಾಡುತ್ತಿದ್ದ ಶವವನ್ನ ಕಿಮ್ಸಗೆ ರವಾನೆ ಮಾಡಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.