ಧಾರವಾಡ ಮುರುಘಾಮಠದಲ್ಲಿ ಭರಮಪ್ಪ ಆತ್ಮಹತ್ಯೆ…!

ಧಾರವಾಡ: ನಗರದ ಪ್ರಸಿದ್ಧ ಶ್ರೀ ಮುರುಘಾಮಠದ ಕಾರಿನ ಶೆಡ್ ನಲ್ಲಿ ವ್ಯಕ್ತಿಯೋರ್ವ ತನ್ನದೇ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸುಮಾರು 85 ವಯಸ್ಸಿನ ಭರಮಪ್ಪ ಪಕ್ಕೀರಪ್ಪ ಹುಣಸಿಕಟ್ಟಿ ಎಂಬುವವರೇ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಭರಮಪ್ಪ, ಅನಾರೋಗ್ಯದಿಂದ ಬಳಲುತ್ತಿದ್ದರು.
ಯಾರೂ ಇಲ್ಲದ ಸಮಯದಲ್ಲಿ ಕಾರಿನ ಶೆಡ್ಡಿಗೆ ಹೋಗಿರುವ ಭರಮಪ್ಪ, ತಮ್ಮದೇ ಲುಂಗಿಯನ್ನ ಬಳಕೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉಪನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.