ಅಮರಗೋಳದ ಬಳಿ ಟ್ರ್ಯಾಕ್ಟರ್ “ಹುಡ್-ಮರಕ್ಕೆ’ ನೇಣಿಗೆ ಶರಣಾದ ಡ್ರೈವರ್…!!!

ನವಲಗುಂದ: ತಾಲೂಕಿನ ಅಮರಗೋಳ ಕ್ರಾಸ್ ಬಳಿ ಇರುವ ಜಮೀನಿನಲ್ಲಿ ಯುವಕನೋರ್ವ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮದ್ಯಾಹ್ನ ಜರುಗಿದೆ.
ಮೃತ ಯುವಕನಾದ ಮಲ್ಲಪ್ಪ ಶ್ರೀಶೈಲ ಬಿರಾದಾರ(23) ಎಂಬುವವನೇ ಆತ್ಮಹತ್ಯೆ ಮಾಡಿಕೊಂಡಿದ್ದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನವನೆಂದು ತಿಳಿದು ಬಂದಿದ್ದು ಈತ ಎರಡು ಮೂರು ತಿಂಗಳಿನಿಂದ ಟ್ರಾಕ್ಟರ್ ಬಾಡಿಗೆಯಾಗಿ ದುಡಿಸುವ ಸಲುವಾಗಿ ನವಲಗುಂದ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಬಾಡಿಗೆ ದುಡಿಸುತ್ತಿದ್ದನು ಎಂದು ತಿಳಿದು ಬಂದಿದೆ.
ಈ ಕುರಿತು ನವಲಗುಂದ ಪೊಲೀಸ್ ಠಾಣಿಯಲ್ಲಿ ದೂರು ದಾಖಲಾಗಿದೆ.