“ಹೆಣ್ಣೆಂಬ ಕಾರಣ” ಮೂವರು ಮಕ್ಕಳೊಂದಿಗೆ ಮಸಣದ ಹಾದಿ ಹಿಡಿದ “ನತದೃಷ್ಟ ತಾಯಿ”…

ಬಾಗಲಕೋಟೆ: ತಾಯಿ ಮತ್ತು ಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನ 28 ವರ್ಷದ ತಾಯಿ ರೇಖಾ ಬಗಲಿ, ಮಕ್ಕಳಾದ ಸನ್ನಿಧಿ(7), ಸಮೃದ್ಧಿ (4), ಶ್ರೀನಿಧಿ(2) ಎಂದು ಗುರುತಿಸಲಾಗಿದೆ.
ಮೃತ ರೇಖಾ ಅವರು ಮಾಜಿ ಸಚಿವ ಎಚ್ ವೈ ಮೇಟಿ ಅವರ ಸಹೋದರಿಯ ಕಡೆ ಸಂಬಂಧಿಕರು ಎನ್ನಲಾಗಿದೆ. ರೇಖಾ ಅವರು ಇತ್ತೀಚೆಗೆ ಮಾನಸಿಕ ಸ್ತೀಮಿತ ಕಳೆದುಕೊಂಡಿದ್ದರು ಎನ್ನಲಾಗಿದೆ.
ಮೃತ ತಾಯಿ ರೇಖಾ ಅವರಿಗೆ ಮೂರು ಜನ ಹೆಣ್ಣು ಮಕ್ಕಳಿದ್ದ ಕಾರಣ ಮಕ್ಕಳ ಓದು, ಬೆಳಸುವುದು, ಮದುವೆ ಹೇಗೆ? ಎಂದು ಚಿಂತಿಸಿ ಮಾನಸಿಕವಾಗಿ ಬಳಲಿದ್ದರು ಎನ್ನಲಾಗಿದೆ.
ಮಾನಸಿಕವಾಗಿ ಬಳಲಿದ್ದ ತಾಯಿ ರೇಖಾ ಮ್ಯಾಂಗೋ ಜ್ಯೂಸ್ ನಲ್ಲಿ ಕ್ರಿಮಿನಾಶಕ ಬೆರೆಸಿ, ಮೊದಲು ಮಕ್ಕಳಿಗೆ ಕುಡಿಸಿ ನಂತರ ತಾನೂ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಬಾಗಲಕೋಟೆಯ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.