ದಯನೀಯ ಸ್ಥಿತಿಯಲ್ಲಿರುವ ಪಕ್ಷಕ್ಕೆ ಉತ್ತಮ ಸ್ಥಿತಿ ಶಿವಕುಮಾರ ತರಲಿ: ಸಚಿವ ಸುಧಾಕರ
1 min readಬೆಂಗಳೂರು: ಡಿಕೆ ಶಿವಕುಮಾರ್ ಕೆಪಿಸಿಸಿ ಸಾರಥಿ ಆಗಿ ಅಧಿಕಾರ ಸ್ವೀಕಾರ ವಿಚಾರವಾಗಿ ಮಾತನಾಡಿದ ವೈಧ್ಯಕೀಯ ಸಚಿವ ಕೆ.ಸುಧಾಕರ, ಡಿ.ಕೆ.ಶಿವಕುಮಾರ ಅವರಿಗೆ ಒಳ್ಳೆಯದಾಗಲಿ. ದೇವರು ಅವ್ರಿಗೆ ಆರೋಗ್ಯ, ಶಕ್ತಿ, ನೆಮ್ಮದಿ ಕೊಡಲಿ. ರಾಜ್ಯ ಪ್ರವಾಸ ಮಾಡಲಿ ಎಂದರು.
ಪಾಪ, ದಯನೀಯವಾಗಿರುವ ಪಕ್ಷವನ್ನ ಸ್ವಲ್ಪ ಉತ್ತಮ ಸ್ಥಿತಿಗೆ ಅವ್ರು ತರಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಸದೃಢವಾಗಿ ಇರಬೇಕು. ಆಗ ನಾವು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಬಿಜೆಪಿ ಪಕ್ಷ ಕೇಡರ್ ಬೇಸ್ ಪಕ್ಷ. ಬೇರೆ ಪಕ್ಷದ ಅಧ್ಯಕ್ಷರು ಯಾರ್ ಆಗ್ತಾರೆ ಅನ್ನೋದು ನಮಗೆ ಮುಖ್ಯ ಅಲ್ಲ. ನಮ್ಮ ಉತ್ತಮ ಸೇವೆಯನ್ನ ಮತ್ತಷ್ಟು ಉತ್ತಮ ಪಡಿಸೋದು ನಮ್ಮ ಆದ್ಯತೆ. ನಾವು ಈಗ 120 ಇದ್ದೇವೆ. ಅದನ್ನ 150 ಕ್ಕೆ ಮುಂದಿನ ಸಾರಿ ತೆಗೆದುಕೊಂಡು ಹೋಗೋ ಕಡೆ ನಮ್ಮ ದೃಷ್ಟಿ ಇರುತ್ತದೆ ಎಂದು ಹೇಳಿದರು.