Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಹಾಡುಹಗಲೇ ಚಾಕು ಇರಿತ…

Spread the love

ಹುಬ್ಬಳ್ಳಿ: ಕೊಲೆ ಮಾಡುವ ಉದ್ದೇಶದಿಂದ ಹರಿತವಾದ ಚಾಕುವಿನಿಂದ ವ್ಯಕ್ತಿಯೋರ್ವನಿಗೆ ಹಾಡುಹಗಲೇ ಇರಿದ ಘಟನೆ ಹಳೇಹುಬ್ಬಳ್ಳಿಯ ಹೆಗ್ಗೇರಿಯಲ್ಲಿ ನಡೆದಿದೆ.

ಹಲ್ಲೆಗೊಳಗಾಗಿರುವ ಆಸೀಫ್..

ಹೆಗ್ಗೇರಿಯ ಆಸೀಫ್ ಎಂಬಾತನ ಮೇಲೆ ಮೂರು ಕಡೆ ಚಾಕುವಿನಿಂದ ಇರಿಯಲಾಗಿದ್ದು, ತೀವ್ರವಾದ ರಕ್ತಸ್ರಾವವಾಗಿದೆ. ತಕ್ಷಣವೇ ಗಾಯಾಳುವನ್ನ ಕಿಮ್ಸ್ ಗೆ ದಾಖಲು ಮಾಡಿ, ಚಿಕಿತ್ಸೆಯನ್ನ ಕೊಡಲಾಗುತ್ತಿದೆ.

ಇಬ್ಬರು ಕೂಡಿಕೊಂಡು ಚಾಕುವಿನಿಂದ ಇರಿಯಲಾಗಿದೆ. ಯಾವ ಕಾರಣಕ್ಕೆ ಘಟನೆ ನಡೆದಿದೆ ಎಂಬುದು ಗೊತ್ತಾಗಿಲ್ಲ. ಹಳೇಹುಬ್ಬಳ್ಳಿ ಠಾಣೆ ಪೊಲೀಸರು ತನಿಖೆ ಮಾಡಬೇಕಿದೆ.


Spread the love

Leave a Reply

Your email address will not be published. Required fields are marked *