Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ಚಾಕು ಇರಿತ”- ಎತ್ತ ಸಾಗುತ್ತಿದೆ ವಾಣಿಜ್ಯನಗರಿಯ ಸ್ಥಿತಿ…

Spread the love

ಹುಬ್ಬಳ್ಳಿ: ಗ್ಯಾಸ್ ಸಿಲಿಂಡರ್ ವಿಚಾರಕ್ಕೇ ದಾಯಾದಿಗಳ ನಡುವೆ ಕಲಹ ಏರ್ಪಟ್ಟು ಓರ್ವನಿಗೆ ಚಾಕು ಹಾಗೂ ಸೆಂಟ್ರಿಂಗ್ ಗನ್ ನಿಂದ ಹಲ್ಲೇ ಮಾಡಿದ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಡಗೇರಿ ಹಾಲ್ ಬಳಿ ನಡೆದಿದೆ.

ಮುನ್ನಾ ಎಂಬಾತ ಕಸ್ತೂರಿ ಬಾ ನಗರದಲ್ಲಿರುವ ತನ್ನ ತಾಯಿಯ ಮನೆಯಲ್ಲಿನ ಗ್ಯಾಸ್ ಸಿಲಿಂಡರ್ ತೆಗೆದುಕೊಂಡು ಹೋಗಲು ಬಂದಾಗ ತಾಯಿಯ ಜೊತೆ ಮುನ್ನಾ ಎಂಬಾತ ಜಗಳ ಪ್ರಾರಂಭ ಮಾಡಿದ್ದಾನೆ. ಅಲ್ಲೇ ಇದ್ದ ಮುನ್ನಾನ ಅಣ್ಣ ರಿಯಾಜ್ ಹಾಗೂ ಆತನ ಭಾವ ಅಸ್ಗರ್ ಎಂಬವರು ಮುನ್ನಾ ಗೇ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ.

ಆದ್ರೆ ಕುಡಿದ ಮತ್ತಿನಲ್ಲಿದ್ದ ಮುನ್ನಾ ತನ್ನ ಅಣ್ಣ ಹಾಗೂ ಭಾವನ ಮೇಲೆ ಹಲ್ಲೇ ಮಾಡಲು ಮುಂದಾದಾಗ, ರಿಯಾಜ್ ಹಾಗೂ ಅಸ್ಗರ್ ಚಾಕು ಹಾಗೂ ಸೆಂಟ್ರಿಂಗ್ ಗನ್ ನಿಂದ ಮುನ್ನಾ ಮೇಲೆ ಹಲ್ಲೇ ಮಾಡಿದ್ದಾರೆ.

ಚಾಕು ಇರಿತದಿಂದ ಗಾಯಗೊಂಡ ಮುನ್ನಾನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *