Posts Slider

Karnataka Voice

Latest Kannada News

ಸಧ್ಯಕ್ಕೆ ನಮ್ಮ ತಲೆಯಲ್ಲಿ ಚುನಾವಣೆಯದ್ದಿಲ್ಲ: ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳ ಸ್ಪಷ್ಟ ನುಡಿ…!!!

1 min read
Spread the love

ಹುಬ್ಬಳ್ಳಿ: ಲೋಕಸಭೆ ಚುನಾವಣೆಯ ಬಗ್ಗೆ ಯಾವುದೇ ವಿಚಾರ ನಮ್ಮ ತಲೆಯಲ್ಲಿ ಇಲ್ಲವೆಂದು ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಸ್ಪಷ್ಟವಾಗಿ ನುಡಿದು, ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಶ್ರೀಗಳು, ನಾಳೆ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಮಠಾಧೀಶರ ಸಭೆ ಆಯೋಜನೆ ಮಾಡಲಾಗಿದ್ದು, ಚಿಂತನ-ಮಂಥನ ನಡೆಸಲಾಗುವುದೆಂದು ಹೇಳಿದರು.

ನಾಡಿನ ಸಮಾಜದ ಒಳಿತಿಗಾಗಿ ಸ್ವಾಮೀಜಿಗಳಾದವರು ಚಿಂತನೆ ನಡೆಸಬೇಕಾಗತ್ತೆ. ಹೊಟ್ಟೆ ಹಸಿದಾಗಲೇ ಊಟ ಮಾಡಬೇಕಾಗತ್ತೆ ಎಂದು ಮಾರ್ಮಿಕವಾಗಿ ನುಡಿದರು.

ನಾಳೆ ನಡೆಯುವ ಸಭೆಯ ಅಧ್ಯಕ್ಷತೆಯನ್ನ‌ ಧಾರವಾಡದ ಮುರುಘಾಮಠದ ಶ್ರೀಗಳು ವಹಿಸಿಕೊಳ್ಳಲಿದ್ದಾರೆಂದು ಹೇಳಿದರು.


Spread the love

Leave a Reply

Your email address will not be published. Required fields are marked *