Posts Slider

Karnataka Voice

Latest Kannada News

ಹುಬ್ಬಳ್ಳಿ-ಅಕ್ರಮ ಸ್ಪೀರಿಟ್ ದಂಧೆಯೂ.. ಆರೋಪಿಯ ಬಂಧನವೂ..

1 min read
Spread the love

ಹುಬ್ಬಳ್ಳಿ: ಕ್ಯಾನದಲ್ಲಿ ತಂದು ಪ್ಲಾಸ್ಟಿಕ್ ಪ್ಯಾಕೇಟಿನಲ್ಲಿ ಸ್ಪೀರಿಟ್ ತುಂಬಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಬಂಧಿಸುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೆಟ್ಲಮೆಂಟ್ ನಿವಾಸಿ ಗಣೇಶ ದುರ್ಗಪ್ಪ ಗುಡಿಹಾಳ ಎಂಬಾತನೇ ಬನ್ನಿಮಹಾಂಕಾಳಿನಗರದ ಸಮುದಾಯ ಭವನದ ಹತ್ತಿರದ ಕಂಪೌಂಡ ಗೋಡೆಯ ಮರೆಯಲ್ಲಿ ಮಾರಾಟ ಮಾಡುತ್ತಿದ್ದ.

ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿರುವ ಇನ್ಸಪೆಕ್ಟರ ಅರುಣಕುಮಾರ ಸಾಳುಂಕೆ ನೇತೃತ್ವದ ಪಿಎಸೈ ಎಸ್.ಆರ್.ಕಿತ್ತೂರ, ಸಿಬ್ಬಂದಿಗಳಾದ ಎಂ.ಡಿ.ಹುಲಕೋಟಿ, ಸಿ.ಕೆ.ಲಮಾಣಿ ದಾಳಿ ಮಾಡಿ ಆರೋಪಿಯನ್ನ ಬಂಧನ ಮಾಡಿದ್ದಾರೆ.

ಈ ಪ್ರಕರಣದಿಂದ ಹುಬ್ಬಳ್ಳಿಯಲ್ಲಿ ಮತ್ತೆ ಸ್ಪೀರಿಟ್ ದಂಧೆ ಜಿಗುರೊಡೆಯುತ್ತಿರುವುದು ಗೊತ್ತಾಗಿದ್ದು, ಪೊಲೀಸರು ಮತ್ತಷ್ಟು ತೀಕ್ಷ್ಣವಾಗಿ ಗಮನಿಸಬೇಕಾದ ಅವಶ್ಯಕತೆಯಿದೆ.


Spread the love

Leave a Reply

Your email address will not be published. Required fields are marked *