Posts Slider

Karnataka Voice

Latest Kannada News

ಅಕ್ಷದವ್ವನಿಗೆ “ಸೊಲ್ಲಾಪುರ ಸರ್” ಕವನ ರಚನೆ…!

Spread the love

ಬದುಕುಬಂಡಿ ???? ????
????????????????????????????????????????

ಗೊತ್ತು ಗುರಿ ಇಲ್ಲದ ಜೀವ
ಎತ್ತಲೋ ಸಾಗಿದೆ
ಎಳೆ ಹಸುಳೆಯ ಬದುಕಿನ ಬಂಡಿ
ಮತ್ತೆಲ್ಲೋ ಹೊರಟಿದೆ |

ರೈಲು ಬಂಡಿಯನೇರಿ ಊರ
ಸೇರುವ ಮುನ್ನ
ಬಳಲಿ ಬಾಯಾರಿ ನೀರು ತರಲು
ಇಳಿದಳು ಸ್ಟೇಷನ್ನ |

ಏನೂ ತೀಳಿಯದ ಕಂದ
ಓಡಿ ಬರುವುದರೊಳಗೆ
ರೈಲು ಬಂಡಿಯು ಸಾಗಿದೆ
ದೂರದೂರಿಗೆ |

ಅತ್ತೂ ಅತ್ತೂ ಕಣ್ಣೀರು ಕೋಡಿ
ಹರಿದು ಹೋಗಿದೆ ಕೇಳಿ,
ಕೇಳುಗರು ಪುಣ್ಯದ ಫಲವಾಗಿ
ಸಾಕಿದರು ಜೋಪಾನ ಅವಳ |

ಹೆಣ್ಣು ಅಬಲೆಯನೆಂದು ನೋಯಿಸದೇ
ದೊಡ್ಡವಳನ್ನಾಗಿ ಮಾಡಿದರು
ದಿನೇದಿನೇ ಬೆಳೆದ ಬಾಲೆಯನು
ಚೆನ್ನಾಗಿ ಕಲಿಸಿದರು |

ಯವೌನಕೆ ಬಂದ ಬಾಲೆಯನು
ಮದುವೆ ಮಾಡಿದರು ಕೂಡಿ
ಬಾಲ್ಯದ ಗೆಳೆಯ ಕೈಹಿಡಿದನು;
ಅದರೊಳಗೊಬ್ಬ ನೋಡಿ |

ಕೆಲವೆ ದಿನಗಳಲ್ಲಿ ಮುರಿದು;
ಹೋಯಿತು ಮಾಂಗಲ್ಯ
ವಿಧವೆಯ ಪಟ್ಟವನೇರಿ
ಕಳಚಿತು ಅವಳ ಭಾಗ್ಯ |

ಗಟ್ಟಿಗಿತ್ತಿ ಮತ್ತೆ ಹೊಸ ಬದುಕಿನತ್ತ
ಹರಸಿದಳು ಚಿತ್ತ
ಸರಕಾರಿ ನೌಕರಿ ಸೇರಿ ಅತ್ತಿತ್ತ
ಮುಖ ಮಾಡಿದಳು ಶಾಲೆಯತ್ತ |

ಬಡಮಕ್ಕಳ ಕಲ್ಯಾಣಕ್ಕಾಗಿ
ದುಡಿದು ಹಣ್ಣಾದಳು
ಬದುಕು ಸವೆಸಿ ಸಣ್ಣಾಗಿ
ಮಕ್ಕಳಿಗೆ ನೆರಳಾದಳು |

ಸರಕಾರಿ ಮಕ್ಕಳ ಬದುಕು
ಶೃಂಗರಿಸಿ ಮಾತೆಯಾದಳು
ದತ್ತಿ ನೀಡುತ ಶಾಲೆಯುದ್ದಕೂ
ದತ್ತಿ ದಾನಿಯಾದಳು |

ಕಲ್ಮಶವಿಲ್ಲದ ಕಠೋರ ಹೃದಯ
ಸಾಗೀತು ಸಮಾಜದತ್ತ
ಸೇವೆಯೇ ಗುರಿ ಮಾಡಿಕೊಂಡು
ನಡೆದಳು ಪುಣ್ಯವಂತೆ |

ಸಮಾಜ ಲೂಸಿ ಸಾಲ್ಡಾನಾಗೆ
ಎತ್ತಿಕೊಂಡಿದೆ ಅಂಗೈಯಲ್ಲಿ
ಅವಳ ಕಣ್ಣೀರು ಬತ್ತಿಹೊಗಿ
ಸಾಗಿದೆ ಹೂನಗೆಯಲಿ |

ಕೀಲು ಕಳಚಿದ ಬಂಡಿಗೆ
ಜಡಿದಳು ಗಟ್ಟಿ
ನಡೆದಳು ಮತ್ತೆ ಸಾರಿದೂರಿಗೆ

ಸಂಘ ಕಟ್ಟಿ |

ಶ್ರೀ ಅಕ್ಬರಅಲಿ ಸೋಲಾಪೂರ
ಧಾರವಾಡ 7975605054


Spread the love

Leave a Reply

Your email address will not be published. Required fields are marked *