ಅಕ್ಷದವ್ವನಿಗೆ “ಸೊಲ್ಲಾಪುರ ಸರ್” ಕವನ ರಚನೆ…!
1 min readಬದುಕುಬಂಡಿ ???? ????
????????????????????????????????????????
ಗೊತ್ತು ಗುರಿ ಇಲ್ಲದ ಜೀವ
ಎತ್ತಲೋ ಸಾಗಿದೆ
ಎಳೆ ಹಸುಳೆಯ ಬದುಕಿನ ಬಂಡಿ
ಮತ್ತೆಲ್ಲೋ ಹೊರಟಿದೆ |
ರೈಲು ಬಂಡಿಯನೇರಿ ಊರ
ಸೇರುವ ಮುನ್ನ
ಬಳಲಿ ಬಾಯಾರಿ ನೀರು ತರಲು
ಇಳಿದಳು ಸ್ಟೇಷನ್ನ |
ಏನೂ ತೀಳಿಯದ ಕಂದ
ಓಡಿ ಬರುವುದರೊಳಗೆ
ರೈಲು ಬಂಡಿಯು ಸಾಗಿದೆ
ದೂರದೂರಿಗೆ |
ಅತ್ತೂ ಅತ್ತೂ ಕಣ್ಣೀರು ಕೋಡಿ
ಹರಿದು ಹೋಗಿದೆ ಕೇಳಿ,
ಕೇಳುಗರು ಪುಣ್ಯದ ಫಲವಾಗಿ
ಸಾಕಿದರು ಜೋಪಾನ ಅವಳ |
ಹೆಣ್ಣು ಅಬಲೆಯನೆಂದು ನೋಯಿಸದೇ
ದೊಡ್ಡವಳನ್ನಾಗಿ ಮಾಡಿದರು
ದಿನೇದಿನೇ ಬೆಳೆದ ಬಾಲೆಯನು
ಚೆನ್ನಾಗಿ ಕಲಿಸಿದರು |
ಯವೌನಕೆ ಬಂದ ಬಾಲೆಯನು
ಮದುವೆ ಮಾಡಿದರು ಕೂಡಿ
ಬಾಲ್ಯದ ಗೆಳೆಯ ಕೈಹಿಡಿದನು;
ಅದರೊಳಗೊಬ್ಬ ನೋಡಿ |
ಕೆಲವೆ ದಿನಗಳಲ್ಲಿ ಮುರಿದು;
ಹೋಯಿತು ಮಾಂಗಲ್ಯ
ವಿಧವೆಯ ಪಟ್ಟವನೇರಿ
ಕಳಚಿತು ಅವಳ ಭಾಗ್ಯ |
ಗಟ್ಟಿಗಿತ್ತಿ ಮತ್ತೆ ಹೊಸ ಬದುಕಿನತ್ತ
ಹರಸಿದಳು ಚಿತ್ತ
ಸರಕಾರಿ ನೌಕರಿ ಸೇರಿ ಅತ್ತಿತ್ತ
ಮುಖ ಮಾಡಿದಳು ಶಾಲೆಯತ್ತ |
ಬಡಮಕ್ಕಳ ಕಲ್ಯಾಣಕ್ಕಾಗಿ
ದುಡಿದು ಹಣ್ಣಾದಳು
ಬದುಕು ಸವೆಸಿ ಸಣ್ಣಾಗಿ
ಮಕ್ಕಳಿಗೆ ನೆರಳಾದಳು |
ಸರಕಾರಿ ಮಕ್ಕಳ ಬದುಕು
ಶೃಂಗರಿಸಿ ಮಾತೆಯಾದಳು
ದತ್ತಿ ನೀಡುತ ಶಾಲೆಯುದ್ದಕೂ
ದತ್ತಿ ದಾನಿಯಾದಳು |
ಕಲ್ಮಶವಿಲ್ಲದ ಕಠೋರ ಹೃದಯ
ಸಾಗೀತು ಸಮಾಜದತ್ತ
ಸೇವೆಯೇ ಗುರಿ ಮಾಡಿಕೊಂಡು
ನಡೆದಳು ಪುಣ್ಯವಂತೆ |
ಸಮಾಜ ಲೂಸಿ ಸಾಲ್ಡಾನಾಗೆ
ಎತ್ತಿಕೊಂಡಿದೆ ಅಂಗೈಯಲ್ಲಿ
ಅವಳ ಕಣ್ಣೀರು ಬತ್ತಿಹೊಗಿ
ಸಾಗಿದೆ ಹೂನಗೆಯಲಿ |
ಕೀಲು ಕಳಚಿದ ಬಂಡಿಗೆ
ಜಡಿದಳು ಗಟ್ಟಿ
ನಡೆದಳು ಮತ್ತೆ ಸಾರಿದೂರಿಗೆ
ಸಂಘ ಕಟ್ಟಿ |
ಶ್ರೀ ಅಕ್ಬರಅಲಿ ಸೋಲಾಪೂರ
ಧಾರವಾಡ 7975605054