Posts Slider

Karnataka Voice

Latest Kannada News

ಯರಿಕೊಪ್ಪದ ರೈತನಿಗೆ ಕಚ್ಚಿದ ಹಾವು: “ಚಿಣಗಿ” ಹಾವು ಹೆಂಗಿದೆ ಗೊತ್ತಾ…!

1 min read
Spread the love

ಧಾರವಾಡ: ತಾಲೂಕಿನ ಯರಿಕೊಪ್ಪ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ  ರೈತರೋರ್ವರಿಗೆ ಹಾವೊಂದು ಕಚ್ಚಿದ ಪರಿಣಾಮ, ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ನಡೆದಿದೆ.

ಯರಿಕೊಪ್ಪ ಗ್ರಾಮದ ಬಸನಗೌಡ ಶಿವನಗೌಡ ಹಂಗರಕಿ ಎಂಬ ರೈತರಿಗೆ ಹಾವು ಕಚ್ಚಿದೆ. ಬೆಳಿಗ್ಗೆ ಹೊಲದಲ್ಲಿ ಕೆಲಸ ಮಾಡುವಾಗ ‘ಚಿಣಗಿ’ ಹಾವು ಕಚ್ಚಿದ್ದು, ರೈತ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ, ಹೊಲದಲ್ಲಿದ್ದ ಇತರರು ಹಾವನ್ನ ಹೊಡೆದು, ರೈತರನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿರುವ ರೈತ, ಆರೋಗ್ಯ ಸುಧಾರಣೆಯಾಗುತ್ತಿದೆ. ಹಾವು ಸಂಪೂರ್ಣವಾಗಿ ಹಸಿರಾಗಿದ್ದರಿಂದ ಮೇವಿನಲ್ಲಿ ಕಂಡು ಬಂದಿಲ್ಲ. ಹೀಗಾಗಿ, ಕಚ್ಚಿದೆ.

ಘಟನೆಯ ಬಗ್ಗೆ ಮಾಹಿತಿಯನ್ನ ಪೊಲೀಸರು ಪಡೆದಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *