ಸೋಮಾಪುರದ ಬಳಿ “ಸ್ಕೋಡಾ ಪ್ಯಾಬೀಯಾ” ಪೀಸ್ ಪೀಸ್: ಹುಬ್ಬಳ್ಳಿಯವ ಸಾವು…
1 min readಧಾರವಾಡ: ತೀವ್ರ ವೇಗವಾಗಿ ಹೋಗುತ್ತಿದ್ದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿ ಸಾವಿಗೀಡಾದ ದುರ್ಘಟನೆ ಧಾರವಾಡ ತಾಲೂಕಿನ ಸೋಮಾಪುರದ ಬಳಿ ಸಂಭವಿಸಿದೆ.
ಸ್ಕೋಡಾ ಪ್ಯಾಬೀಯಾ ವಾಹನ ಘಟನೆಯಲ್ಲಿ ಸಂಪೂರ್ಣವಾಗಿ ತುಂಡು ತುಂಡಾಗಿದ್ದು, ಕಾರಿನ ತುಕಡಿಗಳು ಎಲ್ಲೆಂದರಲ್ಲಿ ಬಿದ್ದಿವೆ. ಅಪಘಾತದಲ್ಲಿ ಹುಬ್ಬಳ್ಳಿಯ ದಾನ್ವೇರ ಸಂಶಿ ಎನ್ನುವವರು ಸಾವಿಗೀಡಾಗಿದ್ದಾರೆ.
ನವಲಗುಂದದಿಂದ ಧಾರವಾಡಕ್ಕೆ ಹೋಗುತ್ತಿದ್ದ ಸಮಯದಲ್ಲಿ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರು ಬ್ಲಾಸ್ಟ್ ಆಗಿರಬಹುದೆಂದು ಶಂಕಿಸಲಾಗಿದೆ. ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.