Posts Slider

Karnataka Voice

Latest Kannada News

“ಬಡವ”ನ ಮಗಳ ದುರ್ಮರಣ: “ಅರವಿಂದ ಏಗನಗೌಡರ” ಸಾವುಕಾರ್ ರೂಪದಲ್ಲಿ ಕ್ರೌರ್ಯ…!!! Video Out…

1 min read
Spread the love

ಧಾರವಾಡ: ಪ್ರೀತಿಯಿಂದ ಬೆಳೆಸುತ್ತಿದ್ದ ಮಗಳು ಜನ್ಮದಿನದ ಖುಷಿಯನ್ನ ಅನುಭವಿಸಿದ ಮರುಕ್ಷಣವೇ ಶ್ರೀಮಂತ ವ್ಯಕ್ತಿಯ ಮಗನಿಂದ ಮಗಳನ್ನ ಕಳೆದುಕೊಂಡ ನತದೃಷ್ಟ ತಂದೆಯೋರ್ವನ ಜೀವನ ಹೇಗಾಗಿ ಬಿಡಬಹುದು ಎಂಬುದನ್ನ ಮನಸ್ಸಿಗೆ ತಾಗುವಂತೆ ಕಿರುಚಿತ್ರವೊಂದು ಹೇಳುತ್ತಿದೆ.

ಹೌದು.. ಈ ಕಿರುಚಿತ್ರ ನೋಡುಗರನ್ನ ಯೂಟ್ಯೂಬ್‌ನಲ್ಲಿ ಮಂತ್ರ ಮುಗ್ಧರನ್ನಾಗಿಸುತ್ತಿದೆ. ಈ ಕಿರು ಚಿತ್ರದಲ್ಲಿ ಕಾಂಗ್ರೆಸ್ ಮುಖಂಡ ಅರವಿಂದ ಏಗನಗೌಡರ ಅವರು, ಸಾವ್ಕಾರನ ಗತ್ತಿನಲ್ಲಿ ಕಂಡು ಬರುತ್ತಾರೆ.

ಇಲ್ಲಿದೆ ನೋಡಿ ಲಿಂಕ್..

ಅಭಿಷೇಕ ದೇಸಾಯಿ ಅವರ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಛಾಯಾಗ್ರಹಣ ಪ್ರವೀಣ.ಮ, ಸಂಕಲನ ನವೀನ ಹೆಬ್ಬಳ್ಳಿ ಅವರದ್ದಿದೆ.

ನವೀನ ಹೆಬ್ಬಳ್ಳಿ ಪ್ರಮುಖ ಪಾತ್ರದಲ್ಲಿದ್ದು, ಆ್ಯಂಕರ್ ಜ್ಯೋತಿ, ಅಭಿಷೇಕ ದೇಸಾಯಿ, ಅರವಿಂದ ಏಗನಗೌಡರ್, ರೋಬೊ‌ ಸಾಗರ, ಅನ್ವಿತಾ ದೇಸಾಯಿ, ಅರ್ಪಿತಾ ದೇಸಾಯಿ, ಸಿದ್ದಪ್ಪ ಹೊಸಮನಿ, ಅಡಿವೆಪ್ಪ ನಟಿಸಿದ್ದಾರೆ.

ನೈಜ ಅಭಿನಯವಿರುವ ಇಂತಹ ಕಲಾವಿದರಿಗೆ ಪ್ರೋತ್ಸಾಹದ ಅವಶ್ಯಕತೆ ಇದೆ.


Spread the love

Leave a Reply

Your email address will not be published. Required fields are marked *