Posts Slider

Karnataka Voice

Latest Kannada News

ಶೋಭಾ ಕರಂದ್ಲಾಜ್ಞೆ ಗ್ರೇಟ್ ಮಾರ್ರೇ: ಕುಟುಕಿದ ಮಾಜಿ ಸಚಿವ ಖಾದರ್

Spread the love

ಮಂಗಳೂರು: ಮಾಜಿ ಸಚಿವ ಯು.ಟಿ.ಖಾದರ್ ರಂಜಾನ್ ದಿನ ಸಂಸದೆ ಶೋಭಾ ಕರಂಧಾಜ್ಞೆ ಅವರನ್ನ ಟ್ವಿಟ್ ಮೂಲಕ ಕುಟುಕಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಸುದ್ಧಿ ಮಾಡಿದೆ.

ನಿಶಾಂತ್ ಎಂಬ ಯುವಕ ಪಾಣೆ ಮಂಗಳೂರು ಬಳಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನು ಕಂಡ ಮೂರು ಮುಸ್ಲಿಂ ಯುವಕರು ಅವರನ್ನು ಕಾಪಾಡಿದ್ರು. ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ನಿಶಾಂತ್ ಕೊನೆಯುಸಿರೆಳೆದಿದ್ದಾನೆ. ಆದರೆ, ಸಂಸದೆ ಶೋಭಾ ಕರಂದ್ಲಾಜೆ ಇದು ಜಿಹಾದಿಗಳಿಂದ ಹಿಂದೂ ಸಂಘಟನೆಯ ಕಲ್ಲಡ್ಕದ ನಿವಾಸಿ ನಿಶಾಂತ್ ಹತ್ಯೆ ಆಗಿದೆ ಎಂದು ಟ್ವಿಟ್ ಮಾಡಿದ್ರು. ಜೊತೆಗೆ ಈ ಪ್ರಕರಣದ ಬಗ್ಗೆ ಅಮಿತ್ ಶಾ ಅವರಿಗೆ ತಿಳಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವಿಟ್ ಮಾಡಿದ್ರು. ಬಳಿಕ ಈ ಟ್ವಿಟ್ ಅನ್ನು ಸಂಸದೆ ಶೋಭಾ ಕರಂದ್ಲಾಜೆ ಅವರು ಡಿಲೀಟ್ ಮಾಡಿದ್ರು. ಬಳಿಕ ಮಾಜಿ ಸಚಿವ ಯುಟಿ ಖಾದರ್ ಅವರು ಶೋಭಾ ಕರಂದ್ಲಾಜೆ ಅವರ ಟ್ವಿಟ್ ಅನ್ನು ಶೋಭಾ ಕರಂದ್ಲಾಜೆ ಅವರಿಗೆ ಪೋಸ್ಟ್ ಮಾಡಿದ್ದಾರೆ. ನಿಮ್ಮ ಟ್ವಿಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಓಡಾಡ್ತಾ ಇದೆ. ಟ್ವಿಟ್ ನ್ನ ಸತ್ಯಾಸತ್ಯತೇ ಬಗ್ಗೆ ನೀವೇ ಅಥವಾ ನಿಮ್ಮ ಭಕ್ತರು  ಹೇಳಬೇಕು. ಆತ್ಮಹತ್ಯೆ ವಿಚಾರ ನೇರವಾಗಿ ಅಮಿತ್ ಶಾ ಅವರಿಗೆ ಹೇಳಿದ್ದು ಗ್ರೇಟ್ ಮಾರ್ರೇ.. ಷೇ..

ಹಾಗೆ ಏಕಿ ಮಿನಿಟ್ ಟೈಮ್ ತಗೊಂಡು ಲಾಕ್ ಡೌನ್ ಇಂದ ಒದ್ದಾಡುತ್ತಿರೋ ರಾಜ್ಯದ ಬಡವರಿಗೆ ಶ್ರಮಿಕರಿಗೆ ಬೇಗ ಹಣ ಬಿಡುಗಡೆ ಮಾಡಿ ಎಂದು ಟ್ವಿಟ್ ಮೂಲಕ ಸಂಸದೆ ಶೋಭಾಕರಂದ್ಲಾಜೆ ಅವರಿಗೆ ಖಾದರ್ ಕುಟುಕಿದ್ದಾರೆ.


Spread the love

Leave a Reply

Your email address will not be published. Required fields are marked *