ಶಿವಾನಂದ ಮುತ್ತಣ್ಣನವರ ಸಹೋದರ ಬಂಧನ…!
1 min readಹುಬ್ಬಳ್ಳಿ: ಹೆತ್ತ ತಾಯಿಯನ್ನ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದ ಪಾಲಿಕೆಯ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಸಹೋದರ ಈಶ್ವರ ಮುತ್ತಣ್ಣನವರನನ್ನ ಬೆಂಡಿಗೇರಿ ಠಾಣೆಯ ಪೊಲೀಸರು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ವೀರಾಪುರ ಓಣಿಯ ಮನೆಯಲ್ಲಿ ತನ್ನ ತಾಯಿಯ ಹತ್ಯೆ ಮಾಡಲು ತನ್ನ ಸಹೋದರ ಈಶ್ವರ ಮುತ್ತಣ್ಣನವರ ಪ್ರಯತ್ನ ಮಾಡಿದ್ದನೆಂದು ಬೆಂಡಿಗೇರಿ ಠಾಣೆಯಲ್ಲಿ ಶಿವಾನಂದ ಮುತ್ತಣ್ಣನವರ ದೂರು ನೀಡಿದ್ದರು.
ಪ್ರಕರಣ ದಾಖಲಾದ ದಿನದಿಂದಲೇ ನಾಪತ್ತೆಯಾಗಿದ್ದ ಈಶ್ವರ ಮುತ್ತಣ್ಣನವರನನ್ನ ಪೊಲೀಸರು ಬಂಧನ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೆಎಸ್ಸಾರ್ಟಿಸಿಯಲ್ಲಿ ನೌಕರಿ ಮಾಡುತ್ತಿದ್ದ ಈಶ್ವರ ಮುತ್ತಣ್ಣನವರ ಸಿನೇಮಾ ಮಾಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು, ಹಣಕ್ಕಾಗಿ ತಾಯಿಯನ್ನೇ ಕೊಲೆ ಮಾಡುವ ಯತ್ನ ಮಾಡಿದ್ದನೆಂದು ಹೇಳಲಾಗಿದೆ.